Advertisement

ಸಮೋಸ ತಿನ್ನಲು ಚಮಚ ಕೊಟ್ಟಿಲ್ಲವೆಂದು ಮುಖ್ಯಮಂತ್ರಿ ಕಚೇರಿಗೆ ದೂರು

08:04 AM Sep 08, 2022 | Team Udayavani |

ಮಧ್ಯಪ್ರದೇಶ: ಹೋಟೆಲ್‌ನ ಊಟ ಸರಿಯಿಲ್ಲ, ಸ್ವಚ್ಛತೆ ಇಲ್ಲವೆಂದು ದೂರು ದಾಖಲಿಸುವವರನ್ನು ನೋಡಿರುತ್ತೀರಿ. ಆದರೆ ಸಮೋಸ ತಿನ್ನುವುದಕ್ಕೆ ಚಮಚ ಕೊಟ್ಟಿಲ್ಲ ಎಂದು ವ್ಯಕ್ತಿಯೊಬ್ಬ ಮುಖ್ಯಮಂತ್ರಿಗಳ ಕಚೇರಿಗೆ ದೂರು ಕೊಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Advertisement

ವಂಶ್‌ ಬಹದ್ದೂರ್‌ ಹೆಸರಿನ ವ್ಯಕ್ತಿ ಆ.30ರಂದು ಇಂಥ ಒಂದು ದೂರು ದಾಖಲಿಸಿದ್ದಾರೆ. “ಛತ್ರಾಪುರ ನಗರದ ರಾಕೇಶ್‌ ಸಮೋಸ ಅಂಗಡಿಯಲ್ಲಿ ಸಮೋಸ ಜತೆ ಚಮಚ ಮತ್ತು ತಟ್ಟೆ ಕೊಡುತ್ತಿಲ್ಲ’ ಎಂದು ಅವರು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ಹೇಳಿದ್ದಾರೆ.

ದೂರನ್ನು ದಾಖಲಿಸಿಕೊಂಡಿದ್ದ ಕಚೇರಿ ಸಿಬ್ಬಂದಿ ಸೆ.5ರಂದು ಆ ದೂರನ್ನು ತಳ್ಳಿಹಾಕಿದ್ದಾರೆ. ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next