Advertisement

Bangalore: ನಶೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ  ಕಾರು ಚಾಲಕ; ಪ್ರಯಾಣಿಕ ಸಾವು

12:01 PM Jan 09, 2024 | Team Udayavani |

ಬೆಂಗಳೂರು: ಮದ್ಯ ಅಮಲಿನಲ್ಲಿ ಕಾರು ಚಾಲಕನೊಬ್ಬ ಅತೀವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ದಲ್ಲಿ ಪ್ರಯಾಣಿಕ ಮೃತಪಟ್ಟಿರುವ ಘಟನೆ ಆರ್‌.ಟಿ.ನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮನೋರಾಯನಪಾಳ್ಯ ನಿವಾಸಿ ರಾಜು(44) ಮೃತ ಪ್ರಯಾಣಿಕ. ಕಾರು ಚಾಲಕ ರವಿಕುಮಾರ್‌ಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದಾನೆ. ಭಾನುವಾರ ರಾತ್ರಿ 8 ಗಂಟೆಗೆ ದಿಣ್ಣೂರು ಮುಖ್ಯರಸ್ತೆ ಸಮೀಪದ ದೇವೇಗೌಡ ಮುಖ್ಯರಸ್ತೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ಘಟನೆ ನಡೆದಿದೆ . ಮೃತ ರಾಜು, ಸ್ನೇಹಿತರಾದ ಮಂಜುನಾಥ್‌ ಹಾಗೂ ರವಿಕುಮಾರ್‌ ಜತೆ ಭಾನುವಾರ ಸಂಜೆ ಕಾವಲ ಭೈರ ಸಂದ್ರದ ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಕಾರು ಚಾಲಕ ರವಿ ಕುಮಾರ್‌, ರಾಜುನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಶಿವಾಜಿನಗರ ಕಡೆಯಿಂದ ಜಯಮಹಲ್‌ ಮುಖ್ಯರಸ್ತೆ ಯಲ್ಲಿ ಬಂದು ದೇವೇಗೌಡ ಮುಖ್ಯರಸ್ತೆ ಯಲ್ಲಿ ಬರುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ರಾಜು ಗಂಭೀರವಾಗಿ ಗಾಯ ಗೊಂಡಿದ್ದರು. ಸ್ಥಳೀಯರು ಗಾಯಾಳು ಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ರಾಜು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಘಟನೆ ಮದ್ಯ ಅಮಲಿನಲ್ಲಿ ಕಾರು ಚಾಲನೆ ಮಾಡಿದ ಆರೋಪದಡಿ ರವಿಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next