Advertisement

ಕಲಬುರಗಿ: ಮನೆ ಮುಂದೆ ನಿಂತಿದ್ದ ಉದ್ಯಮಿಗೆ ಗುಂಡು ಹಾರಿಸಿ ಕೊಲೆ

11:16 PM Aug 27, 2020 | Hari Prasad |

ಕಲಬುರಗಿ: ನಗರದಲ್ಲಿ ಗುರುವಾರ ರಾತ್ರಿ ಗುಂಡಿನ ಮೊರೆತವಾಗಿದೆ.

Advertisement

ಇಲ್ಲಿನ ಜೇವರ್ಗಿ ರಸ್ತೆಯಲ್ಲಿರುವ ಗೋದುತಾಯಿ ಕಾಲೋನಿಯಲ್ಲಿ ಗುಂಡು ಹಾರಿಸಿ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಈ ಘಟನೆಯಿಂದ ಪರಿಸರದ ಜನತೆ ಭಯಭೀತರಾಗಿದ್ದಾರೆ.

ಸುನೀಲ್ ಸೋಹನಲಾಲ್ ರಾಂಕಾ (41) ಎಂಬವರೇ ಕೊಲೆಯಾದ ಉದ್ಯಮಿ.‌ ಮೂಲತಃ ರಾಜಸ್ಥಾನದವರಾದ ಇವರು ನಗರದ ಜೇವರ್ಗಿ ಕ್ರಾಸ್ ಬಳಿಯಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಟೈಲ್ಸ್, ಪಿಒಪಿ, ಸಿಮೆಂಟ್ ವ್ಯಾಪಾರ ಮಾಡಿಕೊಂಡಿದ್ದರು.

ಗುರುವಾರ ರಾತ್ರಿ ರಾಂಕಾ ಅವರು ತಮ್ಮ ಮನೆ ಮುಂದೆ ನಿಂತುಕೊಂಡಿದ್ದ ಸಮಯದಲ್ಲಿ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಉದ್ಯಮಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಡುತ್ತಿದ್ದಾಗ ಸ್ಥಳೀಯರು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Advertisement

ಆದರೆ, ದುಷ್ಕರ್ಮಿಗಳು ಹಾರಿಸಿದ್ದ ಗುಂಡು ನೇರವಾಗಿ ಅವರ ಹೃದಯ ಭಾಗಕ್ಕೇ ಹೊಕ್ಕಿದ್ದರಿಂದ ರಾಂಕಾ ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ.


ಕೊಲೆಯಾದ ಸುನೀಲ್ ರಾಂಕಾ ಅವರು ಹಲವು ವರ್ಷಗಳಿಂದ ಗೋದುತಾಯಿ ನಗರದ ಶಿವ ಮಂದಿರದ ಬಳಿಯಿರುವ ಪಾಟೀಲ್ ಎಂಬವರ ಮನೆಯ ಕೋಣೆಯೊಂದನ್ನು ಬಾಡಿಗೆ ಪಡೆದುಕೊಂಡು ಅಲ್ಲಿ ವಾಸಿಸುತ್ತಿದ್ದರು.

ತುಂಬಾ ಸಂಭಾವಿತರಾಗಿದ್ದ ಸುನೀಲ್ ಹೆಚ್ಚು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಆದರೆ, ಈ ದುಷ್ಕೃತ್ಯವನ್ನು ಯಾರು, ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಮತ್ತು ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿದಂಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯ ವಿಷಯ ತಿಳಿಯುತ್ತಲೇ ಪೊಲೀಸ್ ಆಯುಕ್ತ ಎನ್.ಸತೀಶ ಕುಮಾರ, ಉಪ ಆಯುಕ್ತ ಕಿಶೋರ ಬಾಬು, ಸಹಾಯಕ ಆಯುಕ್ತ ವಿಜಯಕುಮಾರ, ಇನ್‌ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ದುಷ್ಕರ್ಮಿಗಳ ಮಾಹಿತಿ ಕಲೆ ಹಾಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಮತ್ತು ದಾಳಿ ನಡೆಸಿ ಪರಾರಿಯಾಗಿರುವವರ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ಧಾರೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next