Advertisement

ಎತ್ತಿನ ಗಾಡಿ ತೊಳೆಯಲು ಹೋದ ಬಾಲಕ ನೀರುಪಾಲು:  ಶವ ಪತ್ತೆ

12:35 PM May 06, 2022 | Team Udayavani |

 ಕೊಳ್ಳೇಗಾಲ: ತಂದೆಯೊಡನೆ ಎತ್ತಿನ ಗಾಡಿ ತೊಳೆಯಲು ನದಿಗೆ ತೆರಳಿ ನೀರು ಪಾಲಗಿದ್ದ ಬಾಲಕನ ಶವ ಶುಕ್ರವಾರ ಪತ್ತೆಯಾಗಿದೆ.

Advertisement

ಗ್ರಾಮದ ಬಸವರಾಜು ಎಂಬುವರ ಪುತ್ರ ಮನು (14) ಮೃತ ದುರ್ದೈವಿ.

ಈತ ಇಂದು ಬೆಳಿಗ್ಗೆ ಎತ್ತಿನಗಾಡಿ ತೊಳೆಯಲು ತಂದೆಯೊಡನೆ ತೆರಳಿದ್ದ. ಈ ವೇಳೆ ಎತ್ತಿನ ಗಾಡಿ ನದಿಗೆ ಇಳಿಸುವಾಗ ಎತ್ತಿನಗಾಡಿ ಮುಗುಚಿ ಬಾಲಕ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.

ಇದನ್ನೂ ಓದಿ:ಪತ್ನಿ, ಮಕ್ಕಳನ್ನು ಸ್ಫೋಟಿಸಿ ಕೊಂದ ಬಳಿಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತಿ!

ಪೊಲೀಸರು ಸ್ಥಳೀಯರ ನೆರವಿನಿಂದ 5 ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ, ಮೃತ ದೇಹ ಪತ್ತೆ ಹಚ್ಚಿದ್ದಾರೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next