Advertisement

ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್‌ ತಗುಲಿದ್ದ ಬಾಲಕ ಸಾವು

04:18 PM Dec 08, 2022 | Team Udayavani |

ಬೆಂಗಳೂರು: ನಂದಿನಿ ಲೇಔಟ್‌ ಠಾಣೆ ವ್ಯಾಪ್ತಿಯ ವಿಜಯಾನಂದನಗರದಲ್ಲಿ ಮನೆ ಮೇಲಿನ ಟೆರೆಸ್‌ನಲ್ಲಿ ಪಾರಿವಾಳಕ್ಕೆ ರಾಡ್‌ನಿಂದ ಬೆದರಿಸುವ ವೇಳೆ ವಿದ್ಯುತ್‌ ಪ್ರವಹಿಸಿ ತೀವ್ರ ಗಾಯಗೊಂಡಿದ್ದ ಮತ್ತೂಬ್ಬ ಬಾಲಕ ಚಂದ್ರು (13) ಕೂಡ ಚಿಕಿತ್ಸೆ ಫ‌ಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ.

Advertisement

ಡಿ.1ರಂದು ವಿಜಯಾನಂದನಗರದಲ್ಲಿ ಚಂದ್ರು ಹಾಗೂ ಸುಪ್ರೀತ್‌ (11) ಮನೆಯ ಟೆರೆಸ್‌ ಮೇಲೆ ಬಂದಿದ್ದ ಪಾರಿವಾಳ ಹಿಡಿಯುವ ವೇಳೆ ವಿದ್ಯುತ್‌ ಪ್ರವಹಿಸಿತ್ತು. ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸುಪ್ರೀತ್‌ ಮೂರು ದಿನಗಳ ಹಿಂದೆಯಷ್ಟೇ ಅಸುನೀಗಿದ್ದ. ಚಂದ್ರು ಬುಧವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಕಾಲಿಗೆ ದಾರ ಕಟ್ಟಿದ್ದ ಪಾರಿವಾಳದ ಜೊತೆ ಬಾಲಕರು ಆಟವಾಡುತ್ತಿದ್ದರು. ಮನೆಯೊಂದರ ಟೆರೆಸ್‌ ಮೇಲೆ ಹಾದು ಹೋಗಿದ್ದ ವಿದ್ಯುತ್‌ ತಂತಿ ಮೇಲೆ ಹೋಗಿ ಪಾರಿವಾಳ ಕುಳಿತಿತ್ತು. ಅದನ್ನು ನೋಡಿದ್ದ ಬಾಲಕರು, ಪಾರಿವಾಳವನ್ನು ತಂತಿಯಿಂದ ಹಾರಿಸುವುದಕ್ಕಾಗಿ ಅಲ್ಲೆ ಇದ್ದ ಕಬ್ಬಿಣದ ರಾಡ್‌ನಿಂದ ಬೆದರಿಸುವಾಗ ಕರೆಂಟ್‌ ಹೊಡೆದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next