Advertisement

ಟ್ರ್ಯಾಕರ್‌ ಓಡಿಸಲು ಹೋಗಿ ಬಾಲಕ ಸಾವು

03:16 PM May 10, 2023 | Team Udayavani |

ಹಾಸನ: ಅಪ್ರಾಪ್ತ ಬಾಲಕನು ಚಾಲನೆ ಮಾಡುತ್ತಿದ್ದ ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಚಾನೆಲ್‌ ಒಳಗೆ ಉರುಳಿ ಬಿದ್ದ ಪರಿಣಾಮ ಬಾಲಕ ಮೃತ ಪಟ್ಟಿರುವ ಘಟನೆ ಆಲೂರು ತಾಲೂಕು ಕೊಡಿಗೇಹಳ್ಳಿ ಬಳಿ ಸಂಭವಿಸಿದೆ.

Advertisement

ವೇದರಾಜು(16) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಲೊಡಿಗೇಹಳ್ಳಿ ಮಂಜು ಎಂಬುವರ ಮನೆಗೆ ಅವರ ತಮ್ಮನ ಮಗ 16ವರ್ಷದ ವೇದರಾಜು ಬಂದಿದ್ದ. ಆತನೊಂದಿಗೆ ಚಿಕ್ಕಮಗಳೂರಿನ ಗಾಂಧಿ ನಗರದ ಸಂಬಂಧಿ ಶಶಾಂಕ್‌(13) ಎಂಬಾತನನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ಜಮೀನಿನ ಹತ್ತಿರ ಹೋಗಲು ಸೋಮವಾರ ಬೆಳಗ್ಗೆ 9.30ರಲ್ಲಿ ಗ್ರಾಮದ ಬಳಿ ಚಾನೆಲ್‌ ಏರಿ ಮೇಲೆ ವೇದರಾಜು ಟ್ರ್ಯಾಕ್ಟರ್‌ ಓಡಿಸಿಕೊಂಡು ಹೋಗುತ್ತಿದ್ದ. ಅತಿ ವೇಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಟ್ರಾಕ್ಟರ್‌ ಚಾನಲ್‌ ಒಳಕ್ಕೆ ಉರುಳಿ ಬಿದ್ದಿದ್ದರಿಂದ ಚಾಲನೆ ಮಾಡುತ್ತಿದ್ದ ವೇದರಾಜ ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಆತನೊಂದಿಗೆ ಕುಳಿತಿದ್ದ ಶಶಾಂಕನಿಗೆ ಗಂಭೀರ ಪೆಟ್ಟಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next