Advertisement

ಎ. 2: “ಬಸಂತ್‌ ಉತ್ಸವ್‌’; ಸಿತಾರ್‌-ಬಾನ್ಸುರಿ ಜುಗಲ್‌ಬಂದಿ

01:14 PM Mar 24, 2023 | Team Udayavani |

ಉಡುಪಿ: ವಿನಯ್ಸ್ ಅಕಾಡೆಮಿ ಆಯೋಜಿಸಿ ಪ್ರಸ್ತುತಪಡಿಸುತ್ತಿರುವ ಸಿತಾರ್‌-ಬಾನ್ಸುರಿ ಜುಗಲ್‌ ಬಂದಿ ಸಂಗೀತ ಕಾರ್ಯಕ್ರಮ “ಬಸಂತ್‌ ಉತ್ಸವ್‌’ ಎ. 2ರ ಸಂಜೆ 5.30ರಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

Advertisement

ಇದನ್ನೂ ಓದಿ:ಉಡುಪಿ; ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲ: ಧಾರ್ಮಿಕ ಸಭೆ

ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಪಂ| ಪ್ರವೀಣ್‌ ಗೋಡ್ಖಿಂಡಿ, ಉಸ್ತಾದ್‌ ರಫೀಕ್‌ ಖಾನ್‌ ಅವರು ಸಿತಾರ್‌-ಬಾನ್ಸುರಿ ವಾದನದಲ್ಲಿ ಜತೆಯಾಗಲಿದ್ದಾರೆ. ಅವರೊಂದಿಗೆ ತಬಲಾ ಪಟು ಮಾಯಾಂಕ್‌ ಬೇಡೆಕರ್‌ ತಬಲಾ ಸಾಥ್‌ ನೀಡಲಿದ್ದಾರೆ.

ಸಂಗೀತಾಸಕ್ತರಿಗೆ ಉಚಿತ ಪಾಸ್‌ ಲಭ್ಯವಿದ್ದು, ಉಡುಪಿಯ ವಿದ್ಯಾಸಮುದ್ರ ಮಾರ್ಗದಲ್ಲಿರುವ ವಿನಯ್ಸ್ ಅಕಾಡೆಮಿ ಅಥವಾ ಪ್ರಶಾಂತ್‌ ಗೋಖಲೆ ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next