Advertisement

ಕೋವಿಡ್ : ರಾಜ್ಯದಲ್ಲಿಂದು  789 ಪ್ರಕರಣ|1050 ಸೋಂಕಿತರು ಗುಣಮುಖ

07:04 PM Sep 24, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 789 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿದ್ದು, 23 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.24) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 1050 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 13306 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 0.58 % ಹಾಗೂ ಮರಣ ದರ 2.91 % ಇದೆ ಎಂದು ವರದಿಗಳಲ್ಲಿರುವ ಅಂಕಿ-ಅಂಶಗಳು ತಿಳಿಸಿವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-8, ಬೆಳಗಾವಿ-9, ಬೆಂಗಳೂರು ಗ್ರಾಮಾಂತರ-24, ಬೆಂಗಳೂರು ನಗರ-285, ಬೀದರ್-2, ಚಾಮರಾಜನಗರ-8, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-23, ಚಿತ್ರದುರ್ಗ-5, ದಕ್ಷಿಣ ಕನ್ನಡ-108, ದಾವಣಗೆರೆ-6, ಧಾರವಾಡ-5, ಗದಗ-1, ಹಾಸನ-18, ಹಾವೇರಿ-1, ಕಲಬುರಗಿ-2, ಕೊಡಗು-37, ಕೋಲಾರ-8, ಕೊಪ್ಪಳ-0, ಮಂಡ್ಯ-19, ಮೈಸೂರು-71, ರಾಯಚೂರು-0, ರಾಮನಗರ-2, ಶಿವಮೊಗ್ಗ-13, ತುಮಕೂರು-29, ಉಡುಪಿ-69, ಉತ್ತರ ಕನ್ನಡ-34, ವಿಜಯಪುರ-1, ಯಾದಗಿರಿ-0,

Advertisement

Udayavani is now on Telegram. Click here to join our channel and stay updated with the latest news.

Next