Advertisement

ತಾಯಿಯನ್ನು ಕೊಂದು 77 ಪುಟಗಳ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ!

04:45 PM Sep 05, 2022 | Team Udayavani |

ಹೊಸದಿಲ್ಲಿ: ಯುವಕನೋರ್ವ ತನ್ನ ತಾಯಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ರೋಹಿಣಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು 25 ವರ್ಷದ ಕ್ಷಿತಿಜ್ ಎಂದು ಗುರುತಿಸಲಾಗಿದೆ.

Advertisement

ಕ್ಷಿತಿಜ್ ಗುರುವಾರ ತನ್ನ ತಾಯಿಯನ್ನು ಕೊಂದಿದ್ದಾನೆ. ಬಳಿಕ ತಾನೂ ಹರಿತವಾದ ಆಯುಧದಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ಷಿತಿಜ್ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣದಿಂದ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ವಿಚಾರ ಹೊರಬಿದ್ದಿದೆ.

ಇದನ್ನೂ ಓದಿ:ಜಮ್ಮುವಿನಲ್ಲಿ ಪ್ರತ್ಯೇಕ ಅವಘಡ: ಕಾರುಗಳು ಪ್ರಪಾತಕ್ಕೆ ಉರುಳಿ 7 ಬಲಿ

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಲ್ಕನಿ ಮೂಲಕ ಮನೆಗೆ ಪ್ರವೇಶಿಸಿದ್ದಾರೆ. ಈ ವೇಳೆ ಕ್ಷಿತಿಜ್ ದೇಹವು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಾಯಿಯ ಮೃತದೇಹವು ಶಾಚಾಲಯದಲ್ಲಿತ್ತು.

ಇದೇ ವೇಳೆ ಪೊಲೀಸರಿಗೆ ಕ್ಷಿತಿಜ್ ಬರೆದಿರುವ 77 ಪುಟಗಳ ಆತ್ಮಹತ್ಯೆ ಪತ್ರ ಸಿಕ್ಕಿದೆ. ಇದರಲ್ಲಿ ತಾನು ತಾಯಿಯನ್ನು ಗುರುವಾರದಂದು ಕೊಂದು ಹಾಕಿದ್ದು, ರವಿವಾರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆಯಲಾಗಿದೆ.

Advertisement

ಪೊಲೀಸರ ತಂಡವು ವಿಧಿ ವಿಜ್ಞಾನ ತಂಡದ ಜೊತೆ ಸೇರಿ ತನಿಖೆ ಆರಂಭಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next