Advertisement

ರಾಜ್ಯದ ಮೃಗಾಲಯಗಳಿಂದ 75 ಕೋ. ರೂ. ಆದಾಯ ಸಂಗ್ರಹ

11:33 PM Jan 15, 2023 | Team Udayavani |

ಮೈಸೂರು: ರಾಜ್ಯ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಯ ಮೃಗಾಲಯಗಳಿಂದ 9 ತಿಂಗಳಿನಲ್ಲಿ 75.72 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.

Advertisement

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್‌ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌ ಬಳಿಕ ಮೃಗಾಲಯಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದೆ.

2022ರ ಎ.1ರಿಂದ ಡಿ.31ರ ವರೆಗೆ ರಾಜ್ಯದ ಮೃಗಾಲಯಗಳಿಗೆ 52,77,013 ಮಂದಿ ಭೇಟಿ ನೀಡಿದ್ದಾರೆ. ಮೈಸೂರು ಮೃಗಾಲಯಕ್ಕೆ ಡಿಸೆಂಬರ್‌ನಲ್ಲಿ 5.24 ಲಕ್ಷ ಮಂದಿ ಭೇಟಿ ನೀಡಿರುವುದು ದಾಖಲೆಯಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next