Advertisement

Kasaragod: 70 ಲಕ್ಷ ರೂ. ಲಾಟರಿ ಬಹುಮಾನ ಗೆದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

11:38 PM Feb 03, 2024 | Team Udayavani |

ಕಾಸರಗೋಡು: ನಾಲ್ಕು ತಿಂಗಳ ಹಿಂದೆ 70 ಲಕ್ಷ ರೂ. ಲಾಟರಿ ಬಹುಮಾನ ಪಡೆದ ನೆಲ್ಲಿಕುಂಜೆ ಬೀಚ್‌ ರಸ್ತೆಯ ತ್ಯಾಂಪಣ್ಣ ಶೆಟ್ಟಿ ಭವಾನಿ ದಂಪತಿ ಪುತ್ರ ವಿವೇಕ್‌ ಶೆಟ್ಟಿ (36) ತನ್ನ ಬೇಕರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ವಿಷಯ ತಿಳಿದು ಕಾಸರಗೋಡು ನಗರ ಪೊಲೀಸರು ಸ್ಥಳಕ್ಕೆ ತಲುಪಿ ಪಂಚನಾಮೆ ಮಾಡಿದ ಬಳಿಕ ಮೃತದೇಹವನ್ನು ಜನರಲ್‌ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದರು. ಲಾಟರಿ ಬಹುಮಾನದ ತೆರಿಗೆ ಕಳೆದು 44 ಲಕ್ಷ ರೂ. ವಿವೇಕ್‌ ಶೆಟ್ಟಿ ಅವರಿಗೆ ಲಭಿಸಿದೆ ಎನ್ನಲಾಗಿದೆ.

ವಿವೇಕ್‌ ಶೆಟ್ಟಿ ಅವರಿಗೆ ಯಾವುದೇ ಆರ್ಥಿಕ ಸಮಸ್ಯೆ ಇರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next