Advertisement

ರಾಹುಲ್‌ ಗಾಂಧಿಗೇ ಅಧ್ಯಕ್ಷ ಪಟ್ಟ? 7 ರಾಜ್ಯ ಘಟಕಗಳಿಂದ ನಿರ್ಣಯ

10:29 PM Sep 19, 2022 | Team Udayavani |

ನವದೆಹಲಿ:ಎಐಸಿಸಿ ಅಧ್ಯಕ್ಷರ ಚುನಾವಣೆ ಸಮೀಪಿಸುತ್ತಿರುವಂತೆಯೇ ಆ ಪಟ್ಟವನ್ನು ಮತ್ತೂಮ್ಮೆ ರಾಹುಲ್‌ಗಾಂಧಿ ಅವರಿಗೆ ನೀಡಲು ಒತ್ತಡ ಹೆಚ್ಚುತ್ತಿದೆ. ರಾಜಸ್ಥಾನ ಪ್ರದೇಶದ ಕಾಂಗ್ರೆಸ್‌ ಕಮಿಟಿಯ ಬಳಿಕ ಈಗ ಒಟ್ಟು 7 ರಾಜ್ಯ ಕಾಂಗ್ರೆಸ್‌ ಘಟಕಗಳು ರಾಹುಲ್‌ ಅವರೇ ಅಧ್ಯಕ್ಷ ಸ್ಥಾನಕ್ಕೇರಬೇಕು ಎಂಬ ನಿರ್ಣಯವನ್ನು ಕೈಗೊಂಡಿವೆ.

Advertisement

ಛತ್ತೀಸ್‌ಗಡ, ಗುಜರಾತ್‌, ತಮಿಳುನಾಡು, ಬಿಹಾರ, ಜಮ್ಮು-ಕಾಶ್ಮೀರ ಮತ್ತು ಮಹಾರಾಷ್ಟ್ರಗಳ ರಾಜ್ಯ ಕಾಂಗ್ರೆಸ್‌ ಪದಾಧಿಕಾರಿಗಳು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಆಯ್ಕೆಯನ್ನು ಬೆಂಬಲಿಸಿ ನಿರ್ಣಯ ಕೈಗೊಂಡಿದ್ದಾರೆ. ಅವರೇ ಭವಿಷ್ಯದ ನಾಯಕ, ಪಕ್ಷದ ಚುಕ್ಕಾಣಿಯನ್ನು ರಾಹುಲ್‌ ಅವರೇ ಹಿಡಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಇದೇ 24ರಿಂದಲೇ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಸೋನಿಯಾ-ತರೂರ್‌ ಭೇಟಿ!:
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಕಾಂಗ್ರೆಸ್‌ನ ಹೊಸ ಅಧ್ಯಕ್ಷರು ಉದಯಪುರ ನಿರ್ಣಯವನ್ನು ಅನುಷ್ಠಾನಗೊಳಿಸಬೇಕು ಮತ್ತು ಪಕ್ಷದಲ್ಲಿ ಸುಧಾರಣೆ ತರಬೇಕು ಎಂದು ಕೋರಿ ಪಕ್ಷದ ಯುವ ಕಾರ್ಯಕರ್ತರು ಅರ್ಜಿಯೊಂದನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಸುಮಾರು 650 ಮಂದಿ ಈ ಅರ್ಜಿಗೆ ಸಹಿ ಹಾಕಿದ್ದಾರೆ. ವಿಶೇಷವೆಂದರೆ, ಈ ಅರ್ಜಿಯ ಪ್ರತಿಯನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಕಾಂಗ್ರೆಸ್‌ ನಾಯಕ ಶಶಿತರೂರ್‌, ಈ ಅರ್ಜಿಯನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ. ಈ ಮೂಲಕ ತಾವೂ ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನು ಮತ್ತೂಮ್ಮೆ ಸೂಚ್ಯವಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ, ಸೋಮವಾರ ತರೂರ್‌ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಇತರೆ ನಾಯಕರಾದ ದೀಪೇಂದರ್‌ ಹೂಡಾ, ಜೈ ಪ್ರಕಾಶ್‌ ಅಗರ್ವಾಲ್‌ ಮತ್ತು ವಿಜೇಂದ್ರ ಸಿಂಗ್‌ ಕೂಡ ಅವರಿಗೆ ಸಾಥ್‌ ನೀಡಿದ್ದಾರೆ. ಆದರೆ, ಭೇಟಿ ವೇಳೆ ಯಾವ ವಿಚಾರದ ಬಗ್ಗೆ ಮಾತುಕತೆ ನಡೆದಿದೆ ಎಂಬುದು ಬಹಿರಂಗವಾಗಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next