Advertisement
ಸೇವಾ ಮಂಡಲದ ಕಾರ್ಯಕಾರಿ ಮಂಡಳಿ, ಆಯೋಜನ ಸಮಿತಿ, ಸ್ವಯಂಸೇವಕರು, ಭಕ್ತರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ಸೇವಾ ಮಂಡಲದ ಕಾರ್ಯದರ್ಶಿ ಶಿವಾನಂದ ಭಟ್ ಪ್ರಾರ್ಥನೆಗೈದರು. ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಸ್ವಾಗತಿಸಿ, ಪ್ರಧಾನ ಅರ್ಚಕ ವಿಜಯ ಭಟ್ ನೇತೃತ್ವದಲ್ಲಿ ಮುಂಬಯಿ ಹಾಗೂ ಊರಿನ ವೈಧಿಕರು ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ನನ್ನನ್ನು ಗಣೇಶೋತ್ಸವಕ್ಕೆ ಪ್ರಧಾನ ಸಂಚಾಲಕರನ್ನಾಗಿ ನಿಯುಕ್ತಿಗೊಳಿಸಿದಕ್ಕೆ ಸೇವಾ ಮಂಡಲದ ಕಾರ್ಯಕಾರಿ ಮಂಡಳಿ, ಸಹಕರಿಸಿದ ಸಹ ಸಂಚಾಲಕರಿಗೆ ಕೃತಜ್ಞತೆಗಳು ಎಂದರು.
Related Articles
Advertisement
ಮಾಜಿ ಸಹ ಸಂಚಾಲಕ ಜಿ. ಜಿ. ಪ್ರಭು ಅವರು ಧನಸಂಗ್ರಹಕ್ಕಾಗಿ ಕೆಲವರ ಹೆಸರನ್ನು ಉಲ್ಲೇಖೀಸಿ ದೇವರ ಅನುಗ್ರಹ ಅವರ ಮೇಲೆ ಸದಾಯಿರಲಿ ಎಂದು ಪ್ರಾರ್ಥಿಸಿದರು. ಸತೀಶ್ ರಾಮ ನಾಯಕ್ ಅವರು ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿದರು. ಟ್ರಸ್ಟಿ ಆರ್. ಜಿ. ಭಟ್ ಮಾತನಾಡಿ, ಗಣೇಶೋತ್ಸವಲ್ಲಿ ಪೂಜೆ, ಸೇವೆ ಸಲ್ಲಿಸಿದ ಭಕ್ತರಿಗೆ ಪ್ರಸಾದವನ್ನು ಅವರ ವಿಳಾಸಕ್ಕೆ ತಲುಪಿಸಲು ವಿಳಂಬವಾದರೂ ಹೆಚ್ಚಿನ ಪ್ರಯತ್ನಪಟ್ಟಿದ್ದೇವೆ ಎಂದರು.
ಕಾರ್ಯದರ್ಶಿ ಶಿವಾನಂದ ಭಟ್ ಮಾತನಾಡಿ, ಈ ವರ್ಷ ಕೊರೊನಾ ನಿಮಿತ್ತ ಸರಕಾರಿ ನಿಬಂಧನೆಗಳಿಂದ ಅಪಾರ ಭಕ್ತರಿಗೆ ತೊಂದ ರೆಯಾಗಿದೆ. ಮುಂದಿನ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಎಲ್ಲಾ ವಿಘ್ನಗಳು ದೂರವಾಗಿ ವಿಜೃಂಭಣೆಯಿಂದ ಜರಗುವಂತಾಗಲಿ ಎಂದು ಪ್ರಾರ್ಥಿಸಿ ಸರ್ವರಿಗೂ ವಂದಿಸಿದರು.