Advertisement

ಕೋವಿಡ್: ರಾಜ್ಯದಲ್ಲಿ ಸೋಂಕು ಇಳಿಮುಖ | 10 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ  

06:44 PM Sep 13, 2021 | Team Udayavani |

ಬೆಂಗಳೂರು:  ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಇಂದೂ ಕೂಡ ಹೊಸದಾಗಿ 673 ಹೊಸ ಪ್ರಕರಣಗಳು ಪತ್ತೆಯಾಗಿವೆ.

Advertisement

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.13) ಸಂಜೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 673 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದೆ ಹಾಗೂ 13 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ 1074 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ‍್ಯೆ 16241 ಇದೆ. ಪಾಸಿಟಿವಿಟಿ ದರ 0.56 % ಹಾಗೂ ಡೆತ್ ರೇಟ್ 1.93 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-6, ಬೆಳಗಾವಿ-0, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-214, ಬೀದರ್-0, ಚಾಮರಾಜನಗರ-6, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-35, ಚಿತ್ರದುರ್ಗ-4, ದಕ್ಷಿಣ ಕನ್ನಡ-115, ದಾವಣಗೆರೆ-3, ಧಾರವಾಡ-0, ಗದಗ-0, ಹಾಸನ-51, ಹಾವೇರಿ-0, ಕಲಬುರಗಿ-0, ಕೊಡಗು-31, ಕೋಲಾರ-6, ಕೊಪ್ಪಳ-1, ಮಂಡ್ಯ-4, ಮೈಸೂರು-39, ರಾಯಚೂರು-0, ರಾಮನಗರ-2, ಶಿವಮೊಗ್ಗ-21, ತುಮಕೂರು-36, ಉಡುಪಿ-75, ಉತ್ತರ ಕನ್ನಡ-17, ವಿಜಯಪುರ-0, ಯಾದಗಿರಿ-0.

Advertisement
Advertisement

Udayavani is now on Telegram. Click here to join our channel and stay updated with the latest news.

Next