Advertisement

ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಕ್ಕಳು ಸೇರಿ 6 ಮಂದಿಯ ರಕ್ಷಣೆ

04:08 PM Oct 04, 2021 | Team Udayavani |

ಕಾರವಾರ : ಇಲ್ಲಿನ ರವೀಂದ್ರನಾಥ ಕಡಲ ತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಪ್ರವಾಸಿಗರನ್ನು ಸೋಮವಾರ ರಕ್ಷಿಸಲಾಗಿದೆ.

Advertisement

ಹುಬ್ಬಳ್ಳಿ ಯಿಂದ ಶಫಿ ಎನ್ನುವವರ ಕುಟುಂಬದ 13  ಸದಸ್ಯರು ಪ್ರವಾಸಕ್ಕೆ ಬಂದಿದ್ದರು. ಸಾಗರ ಮತ್ಸ್ಯಾಲಯದ ಹಿಂಭಾಗದ ಸಮುದ್ರದಲ್ಲಿ ಅಪಾಯಕಾರಿ ಸ್ಥಳದಲ್ಲಿ ಬೀಚ್ ಗೆ ಇಳಿದು ಆಟವಾಡುತ್ತಿದ್ದ ವೇಳೆ ಸಮುದ್ರದ ‌ಅಂಡರ್ ಕರೆಂಟ್ ಹೆಚ್ಚಿದ್ದು . ಸಮುದ್ರದ ಅಲೆ ಮಕ್ಕಳನ್ನು ‌ಎಳೆದೊಯ್ದಿದೆ . ತಕ್ಷಣ ಕಡಲ ತೀರದಲ್ಲಿದ್ದ ಲೈಫ್ ಗಾರ್ಡ್ ಮತ್ತು ಪೋಲೀಸರು ರಕ್ಷಣಾ ಕಾರ್ಯ ನಡೆಸಿದ್ದಾರೆ.

ಟೂರಿಸ್ಟ್ ಮಿತ್ರ ರಾಘವೇಂದ್ರ ನಾಯ್ಕ , ಲೈಫ್ ಗಾರ್ಡ್ ಕೇತನ್ ಸಾವಂತ್, ವೇವ್ ಅಡ್ವೆಂಚರ್ಸ್ ಸಿಬ್ಬಂದಿಗಳು ಪ್ರವಾಸಿಗರನ್ನು ರಕ್ಷಣೆ ಮಾಡಿದವರಲ್ಲಿ ಪ್ರಮುಖರು. ಆರೂ ಮಂದಿ ಹುಬ್ಬಳ್ಳಿಯಿಂದ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಬಂದಿದ್ದರು.

ಸಮುದ್ರದ‌ ಅಲೆಗೆ ಸಿಕ್ಕ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next