Advertisement

U.P: ಇಂಡಿಯಾ ಕೂಟದ 6 ಸಂಸದರ ಪಟ್ಟಕ್ಕೆ ಕುತ್ತು?

11:41 PM Jun 11, 2024 | Team Udayavani |

ಲಕ್ನೋ: ಉ.ಪ್ರ.ದ 80 ಕ್ಷೇತ್ರಗಳಲ್ಲಿ 43ರಲ್ಲಿ ಗೆಲುವು ಸಾಧಿಸಿರುವ ಇಂಡಿಯಾ ಒಕ್ಕೂಟಕ್ಕೆ ಈಗ 6 ಸಂಸದರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಎಸ್‌ಪಿಯ  5, ಕಾಂಗ್ರೆಸ್‌ನ ಒಬ್ಬ ಸಂಸದರ ವಿರುದ್ಧ ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಿವೆ. ಒಂದು ವೇಳೆ ಅವರ ವಿರುದ್ಧ ಆರೋಪಗಳು ಸಾಬೀತಾದಲ್ಲಿ  6 ಕ್ಷೇತ್ರಗಳಲ್ಲೂ ಉಪ-ಚುನಾವಣೆ ನಡೆಯುವ ಅನಿವಾರ್ಯತೆ ಉಂಟಾಗಲಿದೆ.

Advertisement

ಘಾಜಿಪುರ ಸಂಸದ ಅಫ‌jಲ್‌ ಅನ್ಸಾರಿ ವಿರುದ್ಧ ಈಗಾಗಲೇ ಗೂಂಡಾ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, 4 ವರ್ಷ ಜೈಲು ಶಿಕ್ಷೆಗೂ ಗುರಿಪಡಿಸಲಾಗಿದೆ. ಅಲಹಾಬಾದ್‌ ಹೈಕೋರ್ಟ್‌ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಜುಲೈನಲ್ಲಿ ಇದೇ ಪ್ರಕರಣದ ವಿಚಾರಣೆ ನಡೆಯಲಿದೆ. ಅಜಂಗಢದ ಸಂಸದ ಧಮೇಂದ್ರ ಯಾದವ್‌ ವಿರುದ್ಧವೂ ನಾಲ್ಕು ಕ್ರಿಮಿನಲ್‌ ಪ್ರಕರಣಗಳಿವೆ.

ಜುನ್ಪುರ ಎಂಪಿ ಬಾಬು ಸಿಂಗ್‌ ಕುಶ್ವಾಹ ವಿರುದ್ಧ ಎನ್‌ಆರ್‌ಎಚ್‌ಎಂ ಹಗರಣ ಸಂಬಂಧಿಸಿದ 25 ಕೇಸುಗಳಿವೆ ಹಾಗೂ ಸುಲ್ತಾನಪುರ ಸಂಸದ ರಾಂಭುವಲ್‌ ನಿಶಾದ್‌ ವಿರುದ್ಧ ಗುಂಡಾ ಕಾಯ್ದೆಯ 1 ಪ್ರಕರಣವೂ ಸೇರಿ ಒಟ್ಟು 8 ಕೇಸುಗಳಿವೆ. ಇನ್ನು ಚಂದೌಲಿ ಸಂಸದ ಬಿರೇಂದ್ರ ಸಿಂಗ್‌ ಹಾಗೂ ಸಹರನ್‌ಪುರ ಕಾಂಗ್ರೆಸ್‌ ಸಂಸದ ಇಮ್ರಾನ್‌ ಮಸೂದ್‌ ಅವರ ವಿರುದ್ಧವೂ ವಿವಿಧ ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next