Advertisement

ರಾಜ್ಯದಲ್ಲಿ ತಗ್ಗಿದ ಮಹಾಮಾರಿ|ಇಂದು 559 ಹೊಸ ಪ್ರಕರಣ ಪತ್ತೆ

06:17 PM Sep 14, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ (ಸೋಮವಾರ) ಇಂದು (ಮಂಗಳವಾರ) ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 559 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದೆ ಹಾಗೂ 12 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು(ಸೆ.14) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 1034 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ 15754 ಸಕ್ರಿಯ ಪ್ರಕರಣಗಳಿವೆ ಹಾಗೂ ಪಾಸಿಟಿವಿಟಿ ದರ 0.52% ಹಾಗೂ ಡೆತ್ ರೇಟ್ 2.14 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಬಾಗಲಕೋಟೆ-0, ಬಳ್ಳಾರಿ-2, ಬೆಳಗಾವಿ-11, ಬೆಂಗಳೂರು ಗ್ರಾಮಾಂತರ-8, ಬೆಂಗಳೂರು ನಗರ-231, ಬೀದರ್-1, ಚಾಮರಾಜನಗರ-3, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-8, ಚಿತ್ರದುರ್ಗ-2, ದಕ್ಷಿಣ ಕನ್ನಡ-87, ದಾವಣಗೆರೆ-9, ಧಾರವಾಡ-1, ಗದಗ-0, ಹಾಸನ-10, ಹಾವೇರಿ-1, ಕಲಬುರಗಿ-3, ಕೊಡಗು-23, ಕೋಲಾರ-9, ಕೊಪ್ಪಳ-1, ಮಂಡ್ಯ-10, ಮೈಸೂರು-28, ರಾಯಚೂರು-1, ರಾಮನಗರ-0, ಶಿವಮೊಗ್ಗ-8, ತುಮಕೂರು-24, ಉಡುಪಿ-57, ಉತ್ತರ ಕನ್ನಡ-18, ವಿಜಯಪುರ-1, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next