Advertisement

ಕೇಂದ್ರದಿಂದ 546 ಕೋಟಿ ನೆರವು

06:00 AM Nov 20, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸುರಿದ ಮಳೆಯಿಂದ ಸಂಭವಿಸಿದ್ದ ಹಾನಿಯ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ಸಂಬಂಧ 546 ಕೋಟಿ ರೂ. ಮಂಜೂರಿಗೆ ಅನುಮತಿ ದೊರೆತಿದೆ. 

Advertisement

ಕೊಡಗು ಸಹಿತವಾಗಿ ರಾಜ್ಯದ ವಿವಿಧ ಭಾಗದಲ್ಲಿ ಮಹಾಮಳೆಗೆ ಸಾವಿರಾರು ಕೋಟಿ ರೂ.ಗಳಷ್ಟು ನಷ್ಟವಾಗಿತ್ತು. ಕೊಡಗಿನ ವಿವಿಧ ಭಾಗದಲ್ಲಿ ಭೂ ಕುಸಿತದಿಂದ ಜೀವ ಹಾನಿ, ಮನೆ, ಜಮೀನು ಸಂಪೂರ್ಣ ನಾಶವಾಗಿತ್ತು. ಇದೆಲ್ಲದಕ್ಕೂ ಪರಿಹಾರ ಕೋರಿ ಆಗಸ್ಟ್‌ ತಿಂಗಳಲ್ಲಿ ಕೇಂದ್ರಕ್ಕೆ ವಿಸ್ತೃತ ಪ್ರಸ್ತಾವನೆ ರಾಜ್ಯದಿಂದ ಸಲ್ಲಿಸಲಾಗಿತ್ತು. ಪ್ರಸ್ತಾವನೆಯ ಆಧಾರದಲ್ಲಿ ರಾಜ್ಯಕ್ಕೆ 546 ಕೋಟಿ ರೂ.ಗಳನ್ನು ಮಂಜೂರು ಮಾಡಲು ಸೋಮವಾರ ಕೇಂದ್ರದ ಉನ್ನತ ಮಟ್ಟದ ಸಮಿತಿ ಅನುಮತಿ ನೀಡಿದೆ ಎಂದು ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗರಾಮ್‌ ಬಡೇರಿಯಾ ಪ್ರಕಟಣೆಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next