Advertisement
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.30ರಂದು ಬೆಳಗ್ಗೆ 7.30 ರಿಂದ 9.30ರವರೆಗೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಚಿತ್ತಾರ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
Related Articles
Advertisement
ಪ್ರತಿಭಾ ಪ್ರದರ್ಶನ: ಅ.3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷಚೇತನ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಪದವಿ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಚಿತ್ರಕಲಾ ಸ್ಪರ್ಧೆ. ಮಧ್ಯಾಹ್ನ 3 ರಿಂದ ಸಂಜೆ 5ಗಂಟೆವರೆಗೆ ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು, ಸಂಜೆ 5ರಿಂದ 6ಗಂಟೆವರೆಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6ರಿಂದ ರಾತ್ರಿ 8ಗಂಟೆವರೆಗೆ 18 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಅ.4ರಂದು ಬೆಳಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ಕಿರುತೆರೆಯ ಒಗ್ಗರಣೆ ಡಬ್ಬಿ ಕಾರ್ಯಕ್ರಮ ಖ್ಯಾತಿಯ ಮುರಳಿ ನೇತೃತ್ವದಲ್ಲಿ ಸವಿರುಚಿ ಒಲೆ ರಹಿತ ಅಡುಗೆ ಸ್ಪರ್ಧೆ, ಚುಟುಕು ಹಾಸ್ಯ ಸ್ಪರ್ಧೆ ಹಾಗೂ ದಂಪತಿಗಳ ಸ್ಪರ್ಧೆ. ಸಂಜೆ 4 ರಿಂದ 6ಗಂಟೆವರೆಗೆ ಮಿಮಿಕ್ರಿ ಕಲಾವಿದ ಗೋಪಿ ಅವರಿಂದ ಮಿಮಿಕ್ರಿ. ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್, ಉಪಾಧ್ಯಕ್ಷರುಗಳಾದ ಅನ್ನಪೂರ್ಣ, ಟಿ.ಎನ್.ಶಾಂತ, ರತ್ನ ಲಕ್ಷ್ಮಣ್, ಕಾರ್ಯಾಧ್ಯಕ್ಷೆ ಕೆ.ಪದ್ಮ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಮಹಿಳೆಯರಿಂದ ವಿಭಿನ್ನ, ಆಕರ್ಷಕ ಕಾರ್ಯಕ್ರಮ: ಅ.1ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸುವ ಮಹಿಳೆಯರಿಂದ ಜಾನಪದ ಸಿರಿ ಜಾನಪದ ನೃತ್ಯ ಕಾರ್ಯಕ್ರಮ. ಮಧ್ಯಾಹ್ನ 2 ರಿಂದ ಸಂಜೆ 5ಗಂಟೆವರೆಗೆ ಮಹಿಳೆಯರಿಂದ ಜಾನಪದ ಗೀತೆ ಸಮೂಹ ನೃತ್ಯ ಸ್ಪರ್ಧೆ, ಚಲನಚಿತ್ರಗೀತೆ ಸಮೂಹ ನೃತ್ಯ ಸ್ಪರ್ಧೆ, ಸಪ್ತಪದಿ ಸಾಂಪ್ರದಾಯಿಕ ವಧು-ವರರ ಉಡುಗೆಯ ಫ್ಯಾಷನ್ ಶೋ ಸ್ಪರ್ಧೆ. ಬಾಂಧವ್ಯ ತಾಯಿ-ಮಗಳ ಫ್ಯಾಷನ್ ಶೋ ಸ್ಪರ್ಧೆ. ಸಂಜೆ 5ರಿಂದ 6ಗಂಟೆವರೆಗೆ ಪೌರಾಣಿಕ ನಾಟಕ ಮತ್ತು ನೃತ್ಯ ರೂಪಕ. ಸಂಜೆ 6ರಿಂದ ರಾತ್ರಿ 8ಗಂಟೆವರೆಗೆ ಜನಪದ ನೃತ್ಯ ಮತ್ತು ಗುಂಪು ಗಾಯನ ಕಾರ್ಯಕ್ರಮ ನಡೆಯಲಿದೆ.