Advertisement

ಮುಳುಗುತ್ತಿದ್ದ ಇಬ್ಬರ ರಕ್ಷಣೆಗೆ ಧಾವಿಸಿದ ಮೂವರು.. ನೀರುಪಾಲಾಗಿ ಐವರು ಮೃತ್ಯು

08:57 AM May 14, 2023 | Team Udayavani |

ಗುಜರಾತ್:‌ ಕೆರೆಯಲ್ಲಿ ಮುಳುಗಿ ಐವರು ಅಪ್ರಾಪ್ತ ಬಾಲಕರು ಮೃತಪಟ್ಟ ಘಟನೆ ಗುಜರಾತ್‌ ನ ಬೊಟಾಡ್ ಜಿಲ್ಲೆಯ ಕೃಷ್ಣ ಸಾಗರ ಕೆರೆಯಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

Advertisement

ಕೃಷ್ಣ ಸಾಗರ ಕೆರೆಯಲ್ಲಿ ಇಬ್ಬರು ಅಪ್ರಾಪ್ತರು ಈಜುತ್ತಿದ್ದರು. ಈ ವೇಳೆ ಬಾಲಕರಿಬ್ಬರು ಕೆರೆಯಲ್ಲಿ ಮುಳುಗುವುದನ್ನು ಅಲ್ಲೇ ಇದ್ದ ಮೂವರು ಬಾಲಕರು ನೋಡಿ ಅವರನ್ನು ರಕ್ಷಣೆ ಮಾಡಲು ಹೋಗಿದ್ದಾರೆ. ದುರಾದೃಷ್ಟವಶಾತ್ ರಕ್ಷಣೆ ಮಾಡಲು ತೆರಳಿದ್ದ ಮೂವರು ಕೂಡ, ಇಬ್ಬರು ಬಾಲಕರೊಂದಿಗೆ ನೀರುಪಾಲಾಗಿದ್ದಾರೆ ಎಂದು ವರದಿ ತಿಳಿಸಿದೆ.

ಪೊಲೀಸರಿಗೆ ಈ ಬಗ್ಗೆ ಸಂಜೆ 4:30 ಕ್ಕೆ ವಿಷಯ ತಿಳಿದಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರೂ ಯಾವ ಪ್ರಯೋಜನವೂ ಆಗಿಲ್ಲ. ಮೃತ ಬಾಲಕರ ವಯಸ್ಸು 16-17 ಆಗಿದೆ. ಮೃತರ ಗುರುತು ಪರಿಚಯ ಇನ್ನಷ್ಟೇ ಆಗಬೇಕಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೊಟಾಡ್ ಎಸ್ಪಿ ಕಿಶೋರ್ ಬಲೋಲಿಯಾ ಎಎನ್‌ ಐಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next