Advertisement

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

09:48 PM Sep 28, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ(Bigg Boss Kannada-11) ‘ಸ್ವರ್ಗ – ನರಕದʼ ಮನೆಗೆ ಹೋಗುವ ಮೂರು ಸ್ಪರ್ಧಿಗಳ ಹೆಸರು ರಿವೀಲ್‌ ಆಗಿದೆ. ಮೂವರು ಸ್ಪರ್ಧಿಗಳು ಯಾವ ಮನೆಗೆ ಹೋಗಬೇಕೆನ್ನುವ ನಿರ್ಧಾರವನ್ನು ಪ್ರೇಕ್ಷಕರು ಮಾಡಿದ್ದಾರೆ.

Advertisement

ʼಸತ್ಯʼ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‌ (Gautami Jadhav) ಎರಡನೇ ಸ್ಪರ್ಧಿಯಾಗಿ ವಾದ – ವಿವಾದದಿಂದಲೇ ಸುದ್ದಿಯಾಗುವ ಲಾಯರ್‌ ಜಗದೀಶ್‌ (Lawyer Jagadish) ಅವರು ಬಿಗ್‌ ಬಾಸ್‌ ಮನೆಯೊಳಗೆ ಹೋಗಲಿದ್ದಾರೆ. ಇನ್ನು ಮೂರನೇ ಸ್ಪರ್ಧಿಯಾಗಿ ಹಿಂದೂ ಫೈಯರ್‌ ಬ್ರ್ಯಾಂಡ್‌ ಖ್ಯಾತಿಯ ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaitra Kundapura) ಅವರು ಹೋಗುವುದು ಅಧಿಕೃತವಾಗಿದೆ.

ಇದನ್ನೂ ಓದಿ: BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

ಈ ಮೂವರ ಬಳಿಕ ನಾಲ್ಕನೇ ಸ್ಪರ್ಧಿಯ ಹೆಸರು ಕೂಡ ರಿವೀಲ್‌ ಆಗಿದೆ.

4ನೇ ಸ್ಪರ್ಧಿ…:  ಈ ಬಾರಿ ದೊಡ್ಮೆನೆ ಆಟಕ್ಕೆ 4ನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್ ಆಗಿ ಇವರು ಇವರು ಎಂಟ್ರಿ ಆಗಲಿದ್ದಾರೆ. ಪ್ರೇಕ್ಷಕರು ಇವರನ್ನು ವೋಟ್‌ ಮಾಡುವ ಸ್ವರ್ಗ – ನರಕದ ಮನೆಗೆ ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

Advertisement

ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮೊದಲಿನಿಂದಲೂ ಚಿನ್ನಾಭರಣದ ಮೇಲೆ ವ್ಯಾಮೋಹ ಇಟ್ಟುಕೊಂಡಿರುವ ಅದನ್ನು ಸದಾ ಮೈಯಲ್ಲಿ ಧರಿಸಿರುತ್ತಾರೆ.

ಆರ್ ಎಸ್‌ ಎಸ್‌ ಪೂರ್ಣವಧಿ ಕಾರ್ಯಕರ್ತನಾಗಿದ್ದ ಸುರೇಶ್‌, ಬಡತನದ ಹಿನ್ನೆಲೆಯಿಂದಲೇ ಬಂದವರು. ನಿರ್ಮಾಣ ಸಂಸ್ಥೆಯನ್ನು ಮುನ್ನಡಿಸಿ ದೊಡ್ಡಮಟ್ಟದ ಯಶಸ್ಸು ಕಂಡವರು. ವಿವಾಹಿತ ಆಗಿರುವ ಇವರು ಒಂದು ಮಗುವಿನ ತಂದೆ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next