Advertisement

ಬೆಳ್ತಂಗಡಿಯ ಯಾಕೂಬ್‌ ಸಹಿತ 47 ಶಿಕ್ಷಕರಿಗೆ “ಆನ್‌ಲೈನ್‌’ಪ್ರಶಸ್ತಿ

11:47 PM Sep 05, 2020 | mahesh |

ಹೊಸದಿಲ್ಲಿ/ ಬೆಂಗಳೂರು: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶಿಕ್ಷಕರ ದಿನವಾದ ಶನಿವಾರ ದೇಶದ 47 ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಬೆಳ್ತಂಗಡಿಯ ಗಣಿತ ಶಿಕ್ಷಕ ಯಾಕೂಬ್‌ ಕೊಯ್ಯೂರು ಈ ಗೌರವ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.

Advertisement

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ವಿದ್ಯಾರ್ಥಿಗಳ ಬದುಕಿನಲ್ಲಿ ಗಣನೀಯ ಬದಲಾವಣೆ ತರುವಲ್ಲಿ ನಿಸ್ವಾರ್ಥ ಕೊಡುಗೆ ನೀಡಿರುವ ದೇಶದ 47 ಶಿಕ್ಷಕರಿಗೆ ಈ ಬಾರಿಯ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ರಾಜ್ಯದ ಇನ್ನಿತರರೆಂದರೆ ಕಲಬುರಗಿಯ ಅಫ್ಜಲ್‌ಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್‌, ಬೆಂಗಳೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕ ಚೆಮ್ಮಲರ್‌ ಷಣ್ಮುಗನ್‌.

Advertisement

Udayavani is now on Telegram. Click here to join our channel and stay updated with the latest news.

Next