ಚಾಲನೆ ನೀಡಿದೆ.
Advertisement
ಜಿಲ್ಲೆಯನ್ನು ಈ ಹಿಂದೆ ಸಾಕ್ಷರತಾ ಜಿಲ್ಲೆ ಎಂದು ಘೋಷಿಸಲಾಗಿತ್ತು. ಆದರೆ ಇನ್ನೂ ಅಕ್ಷರ ಜ್ಞಾನ ವಂಚಿತರಿದ್ದಾರೆ ಎಂಬ ಅನುಮಾನದ ಮೇರೆಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ 15ರಿಂದ 50 ವರ್ಷ ದೊಳಗಿನವರನ್ನು ಗುರಿಯಾಗಿಸಿ ಕೊಂಡು ಸಮೀಕ್ಷೆ ನಡೆಸಲಾಗಿತ್ತು.
Related Articles
Advertisement
ಆರು ತಿಂಗಳ ಕಲಿಕೆಅಕ್ಷರ ವಂಚಿತರಿಗೆ ಅಕ್ಷರಾಭ್ಯಾಸ ಕಲಿಸಲು ಲೋಕ ಶಿಕ್ಷಣ ನಿರ್ದೇಶನಾಲಯದ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ “ಬಾಳಿಗೆ ಬೆಳಕು’ ಪಠ್ಯಪುಸ್ತಕ ಸಿದ್ಧಪಡಿಸಿದೆ. ಸಾಮಾನ್ಯವಾಗಿ ಶಾಲೆಗಳಲ್ಲಿ “ಅಕ್ಷರ- ಅಕ್ಷರದಿಂದ ಶಬ್ದ- ಶಬ್ದದಿಂದ ವಾಕ್ಯ’ ರಚನೆ ಕಲಿಕಾ ಕ್ರಮವಾಗಿರುತ್ತದೆ. ಆದರೆ ಈ ಯೋಜನೆಯಲ್ಲಿ “ವಾಕ್ಯ-ವಾಕ್ಯದಿಂದ ಶಬ್ದ- ಶಬ್ದದಿಂದ ಅಕ್ಷರ’ ಮಾದರಿಯ ಕಲಿಕೆ. ಕಲಿಕೆ ಅವಧಿ ಆರು ತಿಂಗಳು. ದಿನಕ್ಕೆ ಎರಡು ಗಂಟೆ ಕಲಿಕೆ. ಓದುವುದು, ಬರೆಯುವುದು ಹಾಗೂ ಲೆಕ್ಕವೆಂದು ವಿಂಗಡಿಸಲಾಗಿದ್ದು ಪ್ರತಿಯೊಂದಕ್ಕೂ 50 ಅಂಕಗಳಂತೆ ಒಟ್ಟು 150 ಅಂಕಗಳಿರುತ್ತವೆ. ಶೇ. 40 ಅಂಕ ಗಳಿಸಿದರೆ ಉತ್ತೀರ್ಣ ಎಂದು ಪರಿಗಣಿಸಲಾಗುವುದು. ಸರಕಾರದ ಆದೇಶದಂತೆ
15ರಿಂದ 50 ವಯೋಮಾನದವರ ಸಮೀಕ್ಷೆ ನಡೆಸಿ ಅಕ್ಷರ ವಂಚಿತರ ಮಾಹಿತಿ ಕಲೆಹಾಕಿದ್ದು, ಅವರನ್ನು ಸಾಕ್ಷರರನ್ನಾಗಿಸಲು ಜಿಲ್ಲೆಯಲ್ಲಿ ಸಾಕ್ಷರತಾ ಚಟುವಟಿಕೆ ಮತ್ತೆ ಆರಂಭಗೊಂಡಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
– ಸುಧಾಕರ್ ಕೆ., ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ – ಕೇಶವ ಕುಂದರ್