Advertisement

ವಿಧಾನ ಸಭೆಯಲ್ಲಿ ಬಿಜೆಪಿಯ 40% ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧಾರ

10:24 AM Sep 21, 2022 | Team Udayavani |

ಬೆಂಗಳೂರು : ರಾಜ್ಯ ಬಿಜೆಪಿ ಸರಕಾರದ ೪೦% ಭ್ರಷ್ಟಾಚಾರದ ಕುರಿತಂತೆ ಕೊನೆಗೂ ಕಾಂಗ್ರೆಸ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದೆ.

Advertisement

ಇಷ್ಟು ದಿನಗಳ ಕಾಲ ಸದನದ ಹೊರಗೆ ಮಾತ್ರ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದ ಕಾಂಗ್ರೆಸ್ ಈಗ ವಿಧಾನಸಭೆಯಲ್ಲಿ ನಿಯಮಾವಳಿ ಅನುಸಾರ‌ ಚರ್ಚೆಗೆ ಸಿದ್ಧವಾಗಿದೆ. ಈ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಕಳುಹಿಸಿದ್ದಾರೆ.

ಪಿಎಸ್ ಐ ಹಗರಣ ವಿಚಾರ ಚರ್ಚೆಗೆ ಬಂದಾಗ ಸಿದ್ದರಾಮಯ್ಯ ಈ ವಿಚಾರವನ್ನು ಸಾಂಕೇತಿಕವಾಗಿ ಪ್ರಸ್ತಾಪಿಸಿದ್ದರು. ಆದರೆ ಸರಕಾರದ ಎಲ್ಲ ಮುಖಗಳನ್ನು ಅನಾವರಣಗೊಳಿಸಲು ನಿಲುವಳಿ ಸೂಚನೆಯೇ ಮುಖ್ಯ ಎಂದು ಕಾಂಗ್ರೆಸ್ ಸದಸ್ಯರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಸ್ಪೀಕರ್ ಅವಗಾಹನೆಗೆ ನೋಟಿಸ್ ಕಳುಹಿಸಲಾಗಿದೆ.

40% ಕಮಿಷನ್ ವಿಚಾರದಲ್ಲಿ ಕೆಂಪಣ್ಣ ಬರೆದ ಪತ್ರ ಹೊರತುಪಡಿಸಿ ಇನ್ಯಾವುದೇ ದಾಖಲೆಯನ್ನು ಕಾಂಗ್ರೆಸ್ ಇದುವರೆಗೆ ನೀಡಿಲ್ಲ. ಹೀಗಾಗಿ ಸದನದಲ್ಲಿ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಮಡಿಕೇರಿ : ಹಸುಗಳ ಬಲಿ ಪಡೆಯುತ್ತಿದ್ದ ಹುಲಿ ಸೆರೆ, 10 ದಿನಗಳ ಕಾರ್ಯಾಚರಣೆ ಯಶಸ್ವಿ

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next