Advertisement

ಅನುದಾನ ಬರುತ್ತಿದ್ದಂತೆ ಪತ್ನಿಯರು ಪರಾರಿ

12:50 AM Feb 09, 2023 | Team Udayavani |

ಲಕ್ನೋ: ಪ್ರಧಾನಮಂತ್ರಿ ಅವಾಸ್‌ ಯೋಜನೆ ಅಡಿ ತಮ್ಮ ಖಾತೆಗೆ ಅನುದಾನ ಪಡೆದ ನಾಲ್ವರು ವಿವಾಹಿತ ಮಹಿಳೆಯರು, ತಮ್ಮ ತಮ್ಮ ಪತಿಯರನ್ನು ಬಿಟ್ಟು ಪ್ರೇಮಿಗಳೊಡನೆ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

Advertisement

ಆರ್ಥಿಕವಾಗಿ ಹಿಂದುಳಿದ, ಕೆಳ ಮತ್ತು ಮಧ್ಯಮ ಆರ್ಥಿಕ ವರ್ಗಗಳಿಗೆ ಸ್ವಂತ ಸೂರು ಹೊಂದಲು ಪ್ರಧಾನಮಂತ್ರಿ ಅವಾಸ್‌ ಯೋಜನೆಯಡಿ ಅನುದಾನ ಕಲ್ಪಿಸಲಾಗುತ್ತದೆ. ಆದರೆ ಇದಕ್ಕೆ ಕುಟುಂಬದ ಮಹಿಳೆ ಮನೆಯ ಮಾಲಕ ಅಥವಾ ಸಹ ಮಾಲಕರಾಗುವುದನ್ನು ಕೇಂದ್ರ ಕಡ್ಡಾಯ ಮಾಡಿದೆ.

ಯೋಜನೆಯಡಿ ಫ‌ಲಾನುಭವಿಗಳಾದ ನಾಲ್ವರು ಮಹಿಳೆಯರು ಖಾತೆಗೆ ಮೊದಲ ಕಂತು 50,000 ರೂ. ಬರುತ್ತಿದ್ದಂತೆ ಪ್ರೇಮಿಗಳೊಂದಿಗೆ ಓಡಿ ಹೋಗಿದ್ದಾರೆ. ಇದರಿಂದ ಅವರ ಗಂಡಂದಿರು, ಅತ್ತ ಮನೆ ಕಟ್ಟಲಾಗದೆ, ಇತ್ತ ಸಾಲ ಮರುಪಾವತಿಸದೇ ಪರಿತಪಿಸುತ್ತಿದ್ದಾರೆ. ಅವರಿಗೆ ಬ್ಯಾಂಕ್‌ಗಳಿಂದ ನೋಟಿಸ್‌ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next