Advertisement

ನಿಧಿಯಾಸೆಗೆ ನರಬಲಿ ಪ್ರಕರಣ; ನಾಲ್ವರು ಆರೋಪಿಗಳು ಅರೆಸ್ಟ್

11:31 AM Mar 19, 2018 | Sharanya Alva |

ಶಿವಮೊಗ್ಗ: ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಕೇಶಯ್ಯಾ ನಾಯ್ಕ್ ಎಂಬ ವೃದ್ಧರನ್ನು ನಿಧಿಯಾಸೆಗಾಗಿ ಮಾರ್ಚ್ 7ರಂದು ಅಂಜನಾಪುರದಲ್ಲಿ ಹತ್ಯೆಗೈದಿದ್ದರು. ರುಂಡ, ಕೈ, ಕಾಲು ಎಲ್ಲವನ್ನೂ ಬೇರ್ಪಡಿಸಲಾಗಿತ್ತು. ಈ ಪ್ರಕರಣ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು.

ನರಬಲಿ ಕೊಟ್ಟ ಪ್ರಕರಣ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು, ಪ್ರಕರಣದ ಬೆನ್ನತ್ತಿ ತನಿಖೆ ನಡೆಸಿದ್ದ ಪೊಲೀಸರು ರಂಗಪ್ಪ,ಮಂಜುನಾಥ, ಶೇಖರಪ್ಪ ಹಾಗೂ ಗೌಸ್ ಪೀರ್ ಸೇರಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next