Advertisement

ಟ್ರಕ್‌ –ಕಾರು ಢಿಕ್ಕಿ: ಮಹಿಳೆ, ಮಕ್ಕಳು ಸೇರಿ ನಾಲ್ವರು ಮೃತ್ಯು

10:02 AM Feb 22, 2023 | Team Udayavani |

ಛತ್ತೀಸ್‌ ಗಢ: ಟ್ರಕ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್‌ ಗಢದ ಬಲೋದ್‌ ನಲ್ಲಿ ನಡೆದಿದೆ.

Advertisement

ಸಿಮ್ರಾನ್‌, ರಾಜ್‌ ವೀರ್‌ ಸಲೂಜಾ ಸೇರಿ ನಾಲ್ವರು ಕೆಲಸದ ನಿಮಿತ್ತ ರಾಯ್‌ ಪುರಕ್ಕೆ ಹೋಗಿದ್ದರು. ಅಲ್ಲಿ ಸಿಮ್ರಾನ್‌ ಅವರ ಕಾರು ಕೆಟ್ಟು ನಿಂತ ಕಾರಣ, ಬಲೋದ್‌ ಗೆ ಮರಳಲು ಬಾಡಿಗೆ ಕಾರೊಂದನ್ನು ಮಾಡಿದ್ದರು. ಈ ವೇಳೆ ವಾಪಾಸಾಗುವಾಗ ಜಿಲ್ಲೆಯ ಗುಂಡರ್ದೇಹಿ ಪೊಲೀಸ್ ಠಾಣೆ ವ್ಯಾಪ್ತಿಯ ಖಪಡವಾಡ ಕಬ್ಬಿಣ ತುಂಬಿದ್ದ ಟ್ರಕ್‌ ಗೆ ಕಾರು ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಹಾಡಿನಲ್ಲಿ ಪ್ರಚೋದನಕಾರಿ ಸಾಹಿತ್ಯ: ʼಯುಪಿ ಮೇ ಕಾ ಬಾ’ ಖ್ಯಾತಿಯ ಗಾಯಕಿಗೆ ನೋಟಿಸ್‌ ಜಾರಿ

ಪರಿಣಾಮ ಬಾಡಿಗೆ ಕಾರಿನ ಚಾಲಕ, ಸಿಮ್ರಾನ್‌ ಅವರ ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರಾರಿಯಾದ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next