Advertisement

ಬೆಳಗಾವಿ : 4 ತಿಂಗಳ ಗರ್ಭಿಣಿಯ ಸಜೀವ ದಹನಕ್ಕೆ ಯತ್ನಿಸಿದ ರಾಕ್ಷಸರು 

12:14 PM Aug 01, 2018 | Team Udayavani |

ಗೋಕಾಕ್‌ : ವರದಕ್ಷಿಣೆ ತರಲ್ಲಿಲ್ಲ, ತವರು ಮನೆಯ ಜಮೀನು ವರ್ಗಾವಣೆ ಮಾಡಿಸಿಲ್ಲ ಎಂಬ ಕಾರಣಕ್ಕೆ 27 ರ ಹರೆಯದ 4 ತಿಂಗಳ ಗರ್ಭಿಣಿಯನ್ನು ಆಕೆಯ ಪತಿ ಮತ್ತು ಮನೆಯವರು ಸಜೀವವಾಗಿ ದಹಿಸಿ ಕೊಲ್ಲಲು ಯತ್ನಿಸಿದ ಭೀಭತ್ಸ ಘಟನೆ ಮಂಗಳವಾರ ನಡೆದಿದೆ. 

Advertisement

ಅನುಸೂಯಾ ಎಂಬಾಕೆಯನ್ನು ಆಕೆಯ ಪತಿ ಸಿದ್ದಪ್ಪ  ತನ್ನ ಸಹೋದರ, ಆತನ ಪತ್ನಿ ಮತ್ತು ತಂದೆ, ತಾಯಿಯೊಂದಿಗೆ ಸೇರಿಕೊಂಡು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ . ಮೂರು ದಿನಗಳ ಹಿಂದೆ ತವರು ಮನೆಗೆ ಹೋಗಿ ವಾಪಾಸ್‌ ಬಂದ ಬಳಿಕ ತೀವ್ರ ಹಿಂಸೆ ನೀಡ ತೊಡಗಿದ್ದಾರೆ. 

ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ  ಸಜೀವವಾಗಿ ಕೊಲ್ಲಲು ಯತ್ನಿಸಿದ್ದಾರೆ. 90 % ಶೇಕಡಾ ಸುಟ್ಟು ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಅನುಸೂಯಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. 

ಘಟನೆ ಯ ಬಳಿಕ ಪತಿ ಸಿದ್ದಪ್ಪ  ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ. 

ಕುಲಗೋಡ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next