Advertisement

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

08:47 AM Oct 19, 2021 | Team Udayavani |

ಲಕ್ನೋ: ಉತ್ತರ ಪ್ರದೇಶ ರಾಜ್ಯದ ಲಖೀಂಪುರ ಖೇರಿಯಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

“ಆರೋಪಿ ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಶ್ತ್ ಮತ್ತು ಸತ್ಯ ಪ್ರಕಾಶ್ ತ್ರಿಪಾಠಿಯನ್ನು ಲಖಿಂಪುರ್ ಖೇರಿ ಪೊಲೀಸರು ಮತ್ತು ಸ್ವಾಟ್ ಕ್ರೈಂ ಬ್ರಾಂಚ್ ತಂಡ ಬಂಧಿಸಿದೆ. ಪರವಾನಗಿ ಪಡೆದ ರಿವಾಲ್ವರ್ ಮತ್ತು ಮೂರು ಗುಂಡುಗಳನ್ನು ಸತ್ಯ ಪ್ರಕಾಶ್ ತ್ರಿಪಾಠಿಯಿಂದ ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಬಿಜೆಪಿ ನಾಯಕ ಸುಮಿತ್ ಜೈಸ್ವಾಲ್, ಎಸ್‌ಯುವಿಯಿಂದ ರೈತರನ್ನು ಹತ್ತಿಕ್ಕಿದ ವಾಹನಗಳ ಬೆಂಗಾವಲಿನಲ್ಲಿ ಪರಾರಿಯಾಗುತ್ತಿದ್ದು ವೈರಲ್ ವೀಡಿಯೋದಲ್ಲಿ ದಾಖಲಾಗಿತ್ತು.

ಇದನ್ನೂ ಓದಿ:ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

ಅಕ್ಟೋಬರ್ 3 ರಂದು ಟಿಕೊನಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಂತರ, ಸುಮಿತ್ ಜೈಸ್ವಾಲ್ ದೂರಿನ ಆಧಾರದ ಮೇಲೆ ಅದೇ ಪೊಲೀಸ್ ಠಾಣೆಯಲ್ಲಿ ಕೌಂಟರ್-ಎಫ್‌ಐಆರ್ ದಾಖಲಿಸಲಾಯಿತು, ಅವರನ್ನು ಈಗ ಬಂಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next