Advertisement
ಐವತ್ತು ವಸಂತ ಪೂರೈಸಿ ಸುವರ್ಣ ಮಹೋತ್ಸವದಲ್ಲಿರುವ “ಉದಯವಾಣಿ’ಯ ಬೆಂಗಳೂರು ಆವೃತ್ತಿ ಪ್ರಾರಂಭಗೊಂಡು ಮೂವತ್ತು ವರ್ಷವಾಗಿದೆ.
ಡಾ| ಪಿ.ಎಸ್. ಹರ್ಷ ಮಾತನಾಡಿ, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯ ಛಾಪು ಮೂಡಿಸಿರುವ “ಉದಯವಾಣಿ’ ಪತ್ರಿಕೆ ಕನ್ನಡಿಗರ ಮನದಲ್ಲಿ ಬಿಡಿಸಲಾಗದ ಕೊಂಡಿಯಂತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ “ಉದಯವಾಣಿ’ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು ಖುಷಿ ಪಡುವ ಸಂಗತಿಯಾಗಿದೆ. ಮಣಿಪಾಲ್ ಸಮೂಹ ಸಂಸ್ಥೆ ಗಟ್ಟಿಯಾದ ನೈತಿಕ ನೆಲೆಯಲ್ಲಿ ಕಟ್ಟಲಾದ ಸಂಸ್ಥೆಯಾಗಿದೆ ಎಂದು ಹೇಳಿದರು.
Related Articles
ಸಿನೆಮಾ ಸುದ್ದಿಗಳು ಎಂದರೆ ಅದು “ಉದಯವಾಣಿ’ ಎಂಬ ರೀತಿಯಲ್ಲಿ ಛಾಪು ಮೂಡಿಸಿದೆ. ಅಭಿವೃದ್ಧಿಪರ, ಜನಪರ, ಸಮಾಜಮುಖಿ, ಮಾನವೀಯ ಮೌಲ್ಯಗಳ ವರದಿಗಳ ವಿಚಾರದಲ್ಲಿ “ಉದಯವಾಣಿ’ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಹರ್ಷ ತಿಳಿಸಿದರು.
Advertisement
ಮಂಗಳೂರಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತಿರುವ ವೇಳೆ ಬೆಳಗ್ಗೆ ಎದ್ದ ತತ್ಕ್ಷಣ “ಉದಯವಾಣಿ’ ಪತ್ರಿಕೆೆ ಓದುತ್ತಿದ್ದೆ. ಈ ಪತ್ರಿಕೆ ಓದಿ ಮುಂದಿನ ಕೆಲಸಗಳಿಗೆ ಅಣಿಯಾಗುತ್ತಿದ್ದೆ. ಕರಾವಳಿ ಭಾಗದಲ್ಲಂತೂ ಪತ್ರಿಕೆ ಜನರ ಜೀವನಾಡಿಯಾಗಿರುವ ಜತೆಗೆ ರಾಜ್ಯವ್ಯಾಪಿ ಅದೇ ವಿಶ್ವಾಸರ್ಹತೆ ಯನ್ನು ಉಳಿಸಿಕೊಂಡಿದೆ ಎಂದು ಹರ್ಷ ಅವರು ಹೇಳಿದರು.
ಸವಾಲು ಎದುರಿಸಿದ್ದೇವೆ- ವಿನೋದ್ ಕುಮಾರ್ವಿನೋದ್ ಕುಮಾರ್ ಅವರು ಮಾತನಾಡಿ, ಐವತ್ತು ವರ್ಷದ ಹಿಂದೆ ಕರಾವಳಿ ಭಾಗದಲ್ಲಿ ಪತ್ರಿಕೆಯೇ ಇಲ್ಲದ ಸಂದರ್ಭ ಮೋಹನ್ದಾಸ್ ಪೈ ಹಾಗೂ ಸತೀಶ್ ಪೈ ಅವರು “ಉದಯವಾಣಿ’ ಆರಂಭಿಸಿದ್ದರು. 1993ರಲ್ಲಿ ಬೆಂಗಳೂರು ಆವೃತ್ತಿ ಆರಂಭಿಸಲಾಯಿತು. ಬೆಂಗಳೂರು ಆವೃತ್ತಿಗೆ ಇದೀಗ ಮೂವತ್ತರ ಸಂಭ್ರಮ. ಈ 3 ದಶಕಗಳಲ್ಲಿ ಪತ್ರಿಕೆ ಹಲವು ರೀತಿಯ ಸವಾಲುಗಳನ್ನು ಮೆಟ್ಟಿನಿಂತಿದೆ ಎಂದರು. ಮೌಲ್ವಿಕ ವಿಚಾರಣೆಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಜನ ಮಾನಸದಲ್ಲಿ ನೆಲೆ ನಿಂತಿದೆ. ಕರಾವಳಿ ಭಾಗದಲ್ಲಿ “ಉದಯವಾಣಿ’ ಜನರ ಜೀವನಾಡಿಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು. “ಉದಯವಾಣಿ’ ಹುಬ್ಬಳ್ಳಿ ಆವೃತ್ತಿಯ ಸಂಪಾದಕ ವೆಂಕಟೇಶ ಪ್ರಭು, ಬೆಂಗಳೂರು ಆವೃತ್ತಿಯ ಹಂಗಾಮಿ ಸಂಪಾದಕ ಬಿ.ಕೆ. ಗಣೇಶ್, ಮಾರುಕಟ್ಟೆ ವಿಭಾಗದ ಡಿಜಿಎಂ ಸತೀಶ್ ಶಣೈ, ಉಪ ಮುಖ್ಯ ವರದಿಗಾರ ಎಸ್. ಲಕ್ಷ್ಮೀನಾರಾಯಣ, ಮಾರುಕಟ್ಟೆ ವ್ಯವಸ್ಥಾಪಕ ಬಿ.ಕೆ. ಕೃಷ್ಣಪ್ಪ ಹಾಗೂ ಸಿಬಂದಿ 30ರ ಸಂಭ್ರಮಕ್ಕೆ ಸಾಕ್ಷಿಯಾದರು.