Advertisement

ಕಟ್ಟಡ ಕಾರ್ಮಿಕರ ಮಕ್ಕಳಿಗೆ 3,048 ಕೋ.ರೂ.: ಸಚಿವ ಶಿವರಾಮ ಹೆಬ್ಬಾರ್‌

11:58 PM Dec 23, 2022 | Team Udayavani |

ಬೆಳಗಾವಿ: ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ 3,048 ಕೋಟಿ ರೂ. ಧನಸಹಾಯ ಮತ್ತು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದರು.

Advertisement

ಶುಕ್ರವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಪ್ರತಾಪಸಿಂಹ ನಾಯಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನ ಅರ್ಜಿಗಳ ಸಲ್ಲಿಕೆಯಲ್ಲಿ ತಾಂತ್ರಿಕ ದೋಷಗಳಾಗಿದ್ದು ನಿಜ. ಅದನ್ನು ಸರಿಪಡಿಸಿಕೊಂಡು ಎಲ್ಲ ಮಕ್ಕಳಿಗೆ ಸರಕಾರದ ಸೌಲಭ್ಯ ನೀಡುತ್ತೇವೆ. 2017-18 ರಲ್ಲಿ 103 ಕೋಟಿ ರೂ. ನೀಡಲಾಗಿತ್ತು, 2019 ರಲ್ಲಿ 53 ಕೋಟಿ ಮಾತ್ರ ನೀಡಲಾಗಿತ್ತು. ಆದರೆ 2019-22 ರ ಅವಧಿಯಲ್ಲಿ ಅತೀ ಹೆಚ್ಚು 1002 ಕೋಟಿ ರೂ.ಗಳಷ್ಟುವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.

ತಾಂತ್ರಿಕ ತೊಂದರೆಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದು, ಇದನ್ನು ಸರಿಪಡಿಸುವಂತೆ ಸದಸ್ಯ ಪ್ರತಾಪಸಿಂಹ ಅವರು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಸಚಿವ ಹೆಬ್ಟಾರ್‌, ಇ-ಗವರ್ನೆನ್ಸ್‌ನಿಂದ ಆಗಿರುವ ತೊಂದರೆಗಳನ್ನು ಸರಿಪಡಿಸಲು ಮಂಡಳಿಯಿಂದ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಾರ್ಮಿಕರ ಮಕ್ಕಳ 42 ಸಾವಿರದಷ್ಟು ಅರ್ಜಿಗಳು ಶೈಕ್ಷಣಿಕ ಸಹಾಯಧನಕ್ಕಾಗಿ ಬಾಕಿ ಇವೆ. ಇವುಗಳನ್ನು ಶೀಘ್ರ ವಿಲೇವಾರಿ ಮಾಡಿ ಕಾರ್ಮಿಕರ ಮಕ್ಕಳ ಹಿತರಕ್ಷಣೆಗೆ ಆಗತ್ಯವಾದ ಎಲ್ಲ ಕ್ರಮ ವಹಿಸುವುದಾಗಿ ಸಚಿವ ಹೆಬ್ಟಾರ್‌ ಅವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next