Advertisement

ಕೊಡಗು : ತೋಟದ ಕೆಲಸದ ವೇಳೆ ವಿದ್ಯುತ್‌ ಶಾಕ್‌ ; 3 ಬಲಿ

09:39 AM May 20, 2019 | Team Udayavani |

ನಾಪೋಕ್ಲು : ಇಲ್ಲಿನ ದೊಡ್ಡ ಪುಲಿಕೋಟಿ ಎಂಬಲ್ಲಿ ತೋಟದಲ್ಲಿ ಮರ ಕಡಿಯುತ್ತಿದ್ದ ವೇಳೆ ವಿದ್ಯುತ್‌ ತಂತಿ ತಗುಲಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಭಾನುವಾರ ಸಂಭವಿಸಿದೆ.

Advertisement

ಮೃತರು ತಿಮ್ಮಯ್ಯ, ಅನಿಲ್‌ ಮತ್ತು ಕವಿತಾ ಎಂದು ತಿಳಿದು ಬಂದಿದೆ.

ಮರ ಕಡಿಯುತ್ತಿದ್ದ ವೇಳೆ ಕಬ್ಬಿಣದ ಏಣಿ ವಿದ್ಯುತ್‌ ತಂತಿಗೆ ತಗುಲಿ ಶಾಕ್‌ ಹೊಡೆದಿದೆ ಎಂದು ತಿಳಿದು ಬಂದಿದೆ.

ಸುರೇಶ್‌ ಎನ್ನುವವರ ತೋಟದಲ್ಲಿ ಅವಘಡ ನಡೆದಿದೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next