Advertisement

Pavagada: ಶಸ್ತ್ರಚಿಕಿತ್ಸೆ ಬಳಿಕ 3 ಮಹಿಳೆಯರು ಸಾವು; ಕರ್ತವ್ಯ ಲೋಪ ತೋರಿದ ಡಾಕ್ಟರ್‌ ವಜಾ

04:14 PM Feb 27, 2024 | Team Udayavani |

ಪಾವಗಡ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು ಏಳು ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದ್ದು, ಅದರಲ್ಲಿ ಮೂವರು ಬಾಣಂತಿಯರು ಮರಣ ಹೊಂದಿದ್ದರು. ಈ ಹಿನ್ನೆಲೆ ಕುಟುಂಬದ ಸದಸ್ಯರುಗಳು ಕೂಡಲೇ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತು ಮಾಡಬೇಕೆಂದು ಪ್ರತಿಭಟನೆ ನಡೆಸಿದ್ದರು.

Advertisement

ತುಮಕೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತನಿಖಾ ತಂಡ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದಿದ್ದು, ಜಿಲ್ಲಾ ಆರೋಗ್ಯ ಕರಾರು ಒಪ್ಪಂದದ ಪ್ರಕಾರ ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷ್ಯತನ ಬೇಜವಾಬ್ದಾರಿತನ ತೋರಿದ ಹಿನ್ನೆಲೆ ಡಾ.ಪೂಜಾ ಎಂಬವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

‌ಮೂವರು ಮಹಿಳೆಯರು ಮರಣ ‌ಹೊಂದಲು ಕಾರಣಕರ್ತರಾದ ಸರ್ಕಾರಿ ಅಸ್ಪತ್ರೆಯಲ್ಲಿ ಗುತ್ತಿಗೆ ಅಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ಮತ್ತು ಸ್ರೀರೋಗ ತಜ್ಞೆ ಡಾ.ಪೂಜ, ಶುಶ್ರೂಣಾಧಿಕಾರಿ ಪದ್ಮಾವತಿ ಹಾಗೂ ಒ.ಟಿ ತಂತ್ರಜ್ಞ ಕಿರಣ್ ಅವರುಗಳು ಶಸ್ತ್ರ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅರೋಪಿಗಳು ಕೇಳಿ ಬಂದಿದೆ.

ಪಾವಗಡ: ಡಾ.ಕಿರಣ್ ರನ್ನು ವಜಾ ಮಾಡಬೇಕು ಎಂದು ಸಂಘ ಸಂಸ್ಥೆಗಳು ಪ್ರತಿಭಟನೆ

Advertisement

ಪಾವಗಡ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಕಿರಣ್ ಅವರ ನಿರ್ಲಕ್ಷ್ಯದಿಂದ ಮೂವರು ಮಹಿಳೆಯರು ‌ಮರಣ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಡಾ.ಕಿರಣ್ ಬಂದಾಗಿಂದ ಆಸ್ಪತ್ರೆ ಹದಗಟ್ಟಿದ್ದು, ಇವರು ಡಾಕ್ಟರ್ ‌ವೃತ್ತಿಗಿಂತ ರಾಜಕೀಯದಲ್ಲಿ ‌ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಇವರಿಂದಾಗಿ ಇಲ್ಲಿ ಬೇರೆ ವೈದ್ಯರು ಕೆಲಸ ಮಾಡಲು ಬರುತ್ತಿಲ್ಲ ಎಂದು ಸಂಘ ಸಂಸ್ಥೆಗಳು ಮುಖಂಡರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ‌ ಕನ್ನಡ ರಕ್ಷಣೆಯ ವೇದಿಕೆಯ ಸದಸ್ಯರು, ಜಯಕರ್ನಾಟಕ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next