Advertisement

ಪ್ರತಿ ಜಿಲ್ಲೆಯಲ್ಲೂ3 ಗುಜರಿ ಕೇಂದ್ರ

12:59 AM Sep 16, 2022 | Team Udayavani |

ಹೊಸದಿಲ್ಲಿ: ಹಳೆಯ ವಾಹನಗಳ ಬಳಕೆಯನ್ನು ಸ್ಥಗಿತಗೊಳಿಸುವ ಸಂಬಂಧ ದೇಶದ ಪ್ರತೀ ಜಿಲ್ಲೆಯಲ್ಲಿಯೂ ತಲಾ ಮೂರು ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಆಟೋಮೋಟಿವ್‌ ಕಾಂಪೋ ನೆಂಟ್‌ ಮ್ಯಾನುಫ್ಯಾಕ್ಟರರ್ಸ್‌ ಅಸೋಸಿಯೇಶನ್‌ ಆಫ್ ಇಂಡಿಯಾದ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು, 2022ರ ಎ.1ರಿಂದ ಗುಜರಿ ನೀತಿ ಜಾರಿಗೆ ಬಂದಿದ್ದು, ಈ ಮೂಲಕ ದೇಶದ ಆರ್ಥಿಕತೆಗೆ ಚಲನಶೀಲತೆಯನ್ನು ತಂದುಕೊಡಲು ಪ್ರಯತ್ನಿಸಲಾಗುತ್ತಿದೆ. ಅಂದರೆ, ರಸ್ತೆಗಿಳಿಯಲು ಸದೃಢವಾಗಿಲ್ಲದ ಮತ್ತು ಹೆಚ್ಚು ಮಾಲಿನ್ಯ ಕಾರಕವಾದ ವಾಹನಗಳನ್ನು ಗುಜರಿಗೆ ಹಾಕಲು ಅನು ಕೂಲ ಮಾಡಿಕೊಡಲಾಗುತ್ತಿದೆ ಎಂದರು.

ಇಪ್ತತ್ತು ವರ್ಷ ಹಳೆಯದಾದ ವೈಯಕ್ತಿಕ ವಾಹನಗಳು ಮತ್ತು ಹದಿನೈದು ವರ್ಷ ಹಳೆಯದಾದ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕಬಹುದು. ಈ ರೀತಿ ಗುಜರಿಗೆ ಹಾಕಿದವರಿಗೆ ಹೊಸ ವಾಹನ ಖರೀದಿ ವೇಳೆ ರಿಯಾಯಿತಿ ನೀಡಲಾಗುತ್ತದೆ ಎಂದ ಅವರು, ರೋಪ್‌ವೇ, ಕೇಬಲ್‌ ಕಾರ್‌ ಮತ್ತು ಫ‌ುÂನಿಕ್ಯೂಲರ್‌ ರೈಲ್ವೇ ಸ್ಥಾಪನೆಗಾಗಿ ನಮ್ಮ ಸಚಿವಾಲಯಕ್ಕೆ 206 ಪ್ರಸ್ತಾವಗಳು ಬಂದಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next