Advertisement

ಶಿಮ್ಲಾ : ಕಾರು ಪ್ರಪಾತಕ್ಕೆ ಬಿದ್ದು ಮೂವರು ಯುವಕರ ಸಾವು

11:02 AM Aug 24, 2018 | udayavani editorial |

ಶಿಮ್ಲಾ : ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಕಾರೊಂದು ಪ್ರಪಾತಕ್ಕೆ ಬಿದ್ದು ಸಂಭವಿಸಿದ ಭೀಕರ ದುರಂತದಲ್ಲಿ  ಕನಿಷ್ಠ ಮೂವರು ಯುವಕರು ಮೃತಪಟ್ಟು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. 

Advertisement

ಯುವಕರು ಬೊಲೆರೋ ಕ್ಯಾಂಪರ್‌ ನಲ್ಲಿ  ನಾನ್‌ ಖಾರಿಯಿಂದ ಧನವಾಲಿ  ಗ್ರಾಮಕ್ಕೆ ತೆರಳುತ್ತಿದ್ದಾಗ ಧೋನಾ ಗ್ರಾಮದ ಬಳಿ ಈ ದುರಂತ ಸಂಭವಿಸಿತು. 

ಸುದ್ದಿ ತಿಳಿದೊಡನೆಯೇ ಸಹಾಯಕ ಎಸ್‌ಐ ಚಮನ್‌ ನೇಗಿ ಅವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. 

ಮೃತರನ್ನು ಆಶಿಶ್‌ ಅಲಿಯಾಸ್‌ ರಾಮ್‌ ಲಾಲ್‌ (25), ಸುರೇಂದರ್‌ (30) ಮತ್ತು ದಲೀಪ್‌ ಕುಮಾರ್‌ (26) ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಧನವಾಲಿ ಗ್ರಾಮದವರಾಗಿದ್ದಾರೆ. 

ಗಾಯಾಳುಗಳಾದ ಸುರೇಶ್‌, ನೀರಜ್‌ ಕುಮಾರ್‌, ಸುಂದರ್‌ ಮತ್ತು ಹೇಮಚಂದ್‌ ಅವರನ್ನು ನಾಂಖಾರಿಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಾಲಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next