Advertisement

ಪೋರ್ಟ್‌ ವಾರ್ಡ್‌ ಕಾಮಗಾರಿಗಳಿಗೆ 3.87 ಕೋ. ರೂ. ಅನುದಾನ’

01:03 AM Jan 19, 2020 | mahesh |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ಪೋರ್ಟ್‌ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಇಲಾಖೆಗಳಿಂದ 3.87 ಕೋ.ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

Advertisement

ಮನಪಾ ವಿವಿಧ ಇಲಾಖೆಗಳಿಂದ, ರಾಜ್ಯ ಸರಕಾರದ ಜತೆ ಚರ್ಚಿಸಿ ಪೋರ್ಟ್‌ ವಾರ್ಡ್‌ನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅನುದಾನ ಬಿಡುಗಡೆ ಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 19 ಲಕ್ಷ ರೂ. ಅನುದಾನ ನೀಡಲಾಗಿದ್ದು, ಹಳೆ ಬಂದರು ರಸ್ತೆಯ ಬಳಿ ಮೀನು ದಕ್ಕೆಗೆ ಹೋಗುವ ದಾರಿಗೆ ಕಾಲುಸಂಕ ಪುನರ್‌ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ., ಹಳೆ ಬಂದರು ರಸ್ತೆಯ ರೈಲು ಗೂಡ್ಸ್‌ ಶೆಡ್‌ ಬಳಿ ಹೋಗುವ ದಾರಿಗೆ ಕಾಲುಸಂಕ ನಿರ್ಮಾಣ ಕಾಮಗಾರಿಗೆ 9 ಲಕ್ಷ ರೂ. ಅನುದಾನ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಮಳೆಹಾನಿ ಪರಿಹಾರ ನಿಧಿಯಡಿ 13 ಲಕ್ಷ ರೂ.ಅನುದಾನ ಒದಗಿಸಲಾಗಿದ್ದು, ಗೂಡ್‌ ಶೆಡ್‌ ಮುಖ್ಯರಸ್ತೆ ನೀರೇಶ್ವಾಲ್ಯ ಜಂಕ್ಷನ್‌ನಿಂದ ರೈಲ್ವೇ ಗೇಟ್‌ವರೆಗೆ ರಸ್ತೆ ದುರಸ್ತಿ ಕಾಮಗಾರಿಗೆ 8 ಲಕ್ಷ ರೂ. ಹಾಗೂ ಜಿಲ್ಲಾಧಿಕಾರಿ ಕಚೇರಿ ಹಿಂಬದಿ ಕಂದುಕಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ. ಅನುದಾನ ಒದಗಿಸಲಾಗಿದೆ.

ಮೀನುಗಾರಿಕಾ ಇಲಾಖೆಯಿಂದ 1.51 ಕೋ.ರೂ.
ಮೀನುಗಾರಿಕಾ ಇಲಾಖೆಯಿಂದ 1.51 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಮೀನುಗಾರಿಕಾ ಬಂದರಿನ ಆಕ್ಷನ್‌ ಹಾಲ್‌ ಅಭಿವೃದ್ಧಿ ಕಾಮಗಾರಿಗಳಿಗೆ 10.50 ಲಕ್ಷ ರೂ., ಹಳೆ ಮೀನುಗಾರಿಕಾ ಬಂದರಿನ ಉತ್ತರ ದಕ್ಕೆಯ ಬಳಿ ಕುಸಿದ ತಡೆಗೋಡೆ ಅಭಿವೃದ್ಧಿ 15 ಲಕ್ಷ ರೂ., ಹಳೆ ಮೀನುಗಾರಿಕಾ ಬಂದರಿನ ಉತ್ತರ ದಕ್ಕೆಯ ವಾರ್ಫ್‌ನ ಹಾರ್ಡ್‌ ಸರ್ಫೆಸಿಂಗ್‌ ದುರಸ್ತಿ ಕಾಮಗಾರಿ 5 ಲಕ್ಷ ರೂ., ಮೀನುಗಾರಿಕಾ ಬಂದರಿನ ಉಪನಿರ್ದೇಶಕರ ಕಚೇರಿಯಿಂದ ಸಹಾಯಕ ನಿರ್ದೇಶಕರ ಕಚೇರಿ ವರೆಗೆ ಆರ್‌.ಸಿ.ಸಿ. ಚರಂಡಿ ನಿರ್ಮಾಣ 5 ಲಕ್ಷ ರೂ. ಮೀನುಗಾರಿಕಾ ಬಂದರಿನ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದ ವಾರ್ಫ್‌ ಕಾಂಕ್ರೀಟ್‌ಗೆ 5 ಲಕ್ಷ ರೂ., ಮೀನುಗಾರಿಕಾ ಬಂದರಿನ ಯಾಂತ್ರಿಕ ಮೀನುಗಾರರ ಸಂಘದ ದಕ್ಷಿಣ ವಾರ್ಫ್‌ ಕಾಂಕ್ರೀಟ್‌ಗೆ 5 ಲಕ್ಷ ರೂ., ಮೀನುಗಾರಿಕಾ ಬಂದರಿನ ಹರಾಜು ಮಳಿಗೆಯ ಉತ್ತರದ ವಾರ್ಫ್‌ ಕಾಂಕ್ರೀಟ್‌ಗೆ 5 ಲಕ್ಷ ರೂ., ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅವರಣದಲ್ಲಿ ಅಭಿವೃದ್ಧಿ ಹಾಗೂ ಉಪ ನಿರ್ದೇಶಕರ ಕಚೇರಿ ಬಳಿ ರಸ್ತೆ ಅಭಿವೃದ್ಧಿಗೆ 1.5 ಲಕ್ಷ ರೂ., ಹಳೆ ಬಂದರಿನ ಬಿ.ಎಂ.ಫೆರ್ರಿ ಯಿಂದ ಬೆಂಗ್ರೆ (ಕಸಬಾ) ವರೆಗೆ ಹೂಳೆತ್ತುವ ಕಾಮಗಾರಿ 99.50 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದರು.

ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಿಂದ 23 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಲಾಗಿದ್ದು, ರೊಸಾರಿಯೋ ಸೈಂಟ್‌ ಕ್ರಿಸ್ಟೋಫರ್‌ ಹಾಸ್ಟೆಲ್‌ ಮುಂಭಾಗ ಇರುವ ರಸ್ತೆ ಮತ್ತು ಅಡ್ಡರಸ್ತೆಗಳ ಅಭಿವೃದ್ಧಿಗೆ ಅದನ್ನು ವಿನಿಯೋಗಿಸಲಾಗುವುದು. ಮನಪಾ ಸಾಮಾನ್ಯ ನಿಧಿಯಿಂದ 6.01 ಲಕ್ಷ ರೂ. ಬಿಡುಗಡೆಗೊಳಿಸಿದ್ದು ಕಲ್ಸಂಕ ದೈವರಾಜ ಭಗವಾನ್‌ ಬಬ್ಬುಸ್ವಾಮಿ ದೈವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.

Advertisement

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 16 ಲಕ್ಷ ರೂ. ನೀಡಿದ್ದು, ಅದರಲ್ಲಿ ಕಲ್ಸಂಕ ದೈವರಾಜ ಭಗವಾನ್‌ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಗ್ಯಾಲರಿ ನಿರ್ಮಾಣ 6 ಲಕ್ಷ ರೂ., ಪಾಂಡೇಶ್ವರ ಶಿವಸೇವಾ ಸಮಿತಿ ಕಟ್ಟಡದ ಬಳಿ ಅಭಿವೃದ್ಧಿ ಕಾಮಗಾರಿ 5 ಲಕ್ಷ ರೂ., ನೀರೇಶ್ವಾಲ್ಯ ಸೋಮನಾಥ ದೇವಸ್ಥಾನ, ಗೂಡ್‌ ಶೆಡ್‌ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ.ಮೀಸಲಿಡಲಾಗಿದೆ.

ಬಂದರು ಇಲಾಖೆಯಿಂದ 1.59 ಕೋಟಿ ಅನುದಾನ
ಬಂದರು ಇಲಾಖೆಯಿಂದ 1.59 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಹಳೆ ಬಂದರಿನ ಉತ್ತರ ದಕ್ಕೆಯ ಕುಸಿದ ಭಾಗಗಳಲ್ಲಿ ಆರ್‌.ಸಿ.ಸಿ. ತಡೆಗೋಡೆ ನಿರ್ಮಾಣ 50 ಲಕ್ಷ ರೂ. ಹಳೆ ಬಂದರಿನ ಉತ್ತರ ದಕ್ಕೆಯ ಹೈಮಾಸ್ಟ್‌ ಕಂಬಗಳಿಗೆ ಎಲ್‌.ಇ.ಡಿ. ಲೈಟ್‌ಗಳನ್ನು ಅಳವಡಿಸುವುದು 4.85 ಲಕ್ಷ, ಹಳೆ ಬಂದರಿನ ದಕ್ಷಿಣ ದಕ್ಕೆಯ ಹೈಮಾಸ್ಟ್‌ ಕಂಬಗಳಿಗೆ ಎಲ್‌.ಇ.ಡಿ. ಲೈಟ್‌ ಅಳವಡಿಕೆ 5 ಲಕ್ಷ ರೂ. ಹಳೆ ಬಂದರಿನ 2ನೇ ಹಂತದ ಮುಖ್ಯ ದ್ವಾರದ ಬಳಿ ಸಂಪರ್ಕ ಚರಂಡಿ ನಿರ್ಮಾಣ ಕಾಮಗಾರಿ 2.30 ಲಕ್ಷ ರೂ., ಹಳೆ ಬಂದರಿನ ಬೆಂಗ್ರೆ ಬದಿಯಲ್ಲಿ ಡೈಡಾಕ್‌ ನಿರ್ಮಾಣ ಕಾಮಗಾರಿಯ ವಿಸ್ತ್ರತ ಯೋಜನ ವರದಿ ತಯಾರಿಸುವ ಕಾಮಗಾರಿ 10 ಲಕ್ಷ ರೂ., ಹಳೆ ಬಂದರಿನ ದಕ್ಷಿಣ ದಕ್ಕೆಯಲ್ಲಿರುವ “ಎ’ ಗೋದಾಮಿನ ಮೇಲ್ಛಾವಣಿಗೆ ಗ್ಯಾಲ್‌ ವಾಲ್ಯುಮ್‌ ಶೀಟ್‌ ಅಳವಡಿಸುವುದು, ನೆಲಹಾಸಿನ ಅಭಿವೃದ್ಧಿ ಕಾಮಗಾರಿ 49.50 ಲಕ್ಷ ರೂ., ಹಳೆ ಬಂದರಿನ ದ.ದಕ್ಕೆಯ “ಎ’ ಗೋದಾಮಿನ ಬಳಿಯಿರುವ ರೆಸ್ಟ್‌ ರೂಮ್‌, ಪಂಪ್‌ ಹೌಸ್‌, ದಕ್ಕೆಯ ಹಾರ್ಡ್‌ ಸರ್ಫೆಸಿಂಗ್‌ ದುರಸ್ತಿ 16 ಲಕ್ಷ ರೂ., ಹಳೆ ಬಂದರಿನ ಉತ್ತರ ದಕ್ಕೆಯಲ್ಲಿ ಲಕ್ಷದ್ವೀಪ ಸಮೂಹಕ್ಕೆ ನೀಡಿದ ಮೊನೊಪೊಲಿ ಕಟ್ಟಡ ಅಭಿವೃದ್ಧಿಪಡಿಸುವ ಕಾಮಗಾರಿ 13 ಲಕ್ಷ ರೂ., ಹಳೆ ಬಂದರಿನ ಉತ್ತರ ದಕ್ಕೆಯಲ್ಲಿ ಆರ್‌.ಸಿ.ಸಿ. ಹ್ಯೂಮ್‌ ಪೈಪ್‌ ಚರಂಡಿ ನಿರ್ಮಾಣ 5 ಲ.ರೂ. ಬಂದರು ಕಚೇರಿ ಸಿಸಿ ಟಿವಿ ಕೆಮರಾ ಕಂಟ್ರೋಲ್‌ ರೂಮಿನಲ್ಲಿ ಪಿಠೊಪಕರಣ ಒದಗಿಸುವ ಕಾಮಗಾರಿ 3.5 ಲ.ರೂ. ನೀಡಲಾಗಿದೆ ಎಂದು ಶಾಸಕ ಕಾಮತ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next