Advertisement

ಜಮ್ಮು-ಕಾಶ್ಮೀರ, ಲಡಾಖ್‌ನಲ್ಲಿ ಸಿಲುಕಿದ್ದ 275 ಪ್ರಯಾಣಿಕರ ಏರ್‌ಲಿಫ್ಟ್

01:07 AM Feb 23, 2023 | Team Udayavani |

ಶ್ರೀನಗರ : ಹವಾಮಾನ ವೈಪರೀತ್ಯ ಹಾಗೂ ಶ್ರೀನಗರ-ಲೇಹ್‌ ರಾಷ್ಟ್ರೀಯ ಹೆದ್ದಾರಿ ಬಂದ್‌ನಿಂದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಸಿಲುಕಿದ್ದ 275 ಪ್ರಯಾಣಿಕರನ್ನು ಬುಧವಾರ ಏರ್‌ ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯವಿದ್ದ ಕಾರಣ, ಸಾರಿಗೆ ಅಡಚಣೆ ಎದುರಾಗಿದ್ದ ಕಾರಣ ಪ್ರಯಾಣಿಕರು ಸಿಲುಕುವಂತಾಗಿತ್ತು. ಈ ಹಿನ್ನೆಲೆ ಭಾರತೀಯ ವಾಯುಪಡೆಯ ಐಎಲ್‌-76 ವಿಮಾನದಲ್ಲಿ 193 ಪ್ರಯಾಣಿಕರನ್ನು ಜಮ್ಮುವಿನಿಂದ ಲೇಹ್‌ಗೆ ಹಾಗೂ ಎಎನ್‌-32 ವಿಮಾನದಲ್ಲಿ 57 ಪ್ರಯಾಣಿಕರನ್ನು ಕಾರ್ಗಿಲ್‌ನಿಂದ ಜಮ್ಮುವಿಗೆ ಹಾಗೂ ಕಾರ್ಗಿಲ್‌ನಿಂದ ಶ್ರೀನಗರಕ್ಕೆ ಏರ್‌ಲಿಫ್ಟ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next