Advertisement

ದಿಲ್ಲಿ: ಅಗ್ನಿ ದುರಂತದಲ್ಲಿ 26 ಮಂದಿ ಸಜೀವ ದಹನ

11:45 PM May 13, 2022 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ  ಮೆಟ್ರೋ ನಿಲ್ದಾಣದ ಬಳಿ ಯಿರುವ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಬೆಂಕಿ ಅವಘಡ ಸಂಭವಿಸಿದ್ದು, 26 ಮಂದಿ ಸಜೀವ ದಹನಗೊಂಡಿದ್ದಾರೆ.

Advertisement

ಘಟನೆಯಲ್ಲಿ 10ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂಜೆ 4:40ರ ಸುಮಾರಿಗೆ ವಿಷಯ ತಿಳಿದ ತತ್‌ಕ್ಷಣವೇ 22 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಕಟ್ಟಡದ ಬೆಂಕಿ ನಂದಿಸಲು ಹಾಗೂ ಕಟ್ಟಡದಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬಂದಿ ಕೈಗೊಂಡರು.

ರಾತ್ರಿಯ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಟ್ಟಡದಿಂದ ಸುಮಾರು 26 ಮೃತದೇಹಗಳನ್ನು ಹೊರತೆಗೆಯ ಲಾಗಿದ್ದು, ಗಾಯಗೊಂಡಿರುವ ಸುಮಾರು 10 ಜನರನ್ನು ರಕ್ಷಿಸಲಾಗಿದೆ.

ಆದರೆ ಕಟ್ಟಡದಲ್ಲಿ ಇನ್ನೂ ಅನೇಕ ಜನ ಸಿಲುಕಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಏರಬಹುದೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next