ಇಸ್ಲಾಮಾಬಾದ್: 2008ರ ಮುಂಬಯಿ ದಾಳಿಯ ಉಗ್ರರಿಗೆ ತರಬೇತಿ ನೀಡಿದ್ದ, ಲಷ್ಕರೆ ತಯ್ಯಬಾ ಉಗ್ರಸಂಘಟನೆಯ ನಾಯಕ ಅಬ್ದುಲ್ ಸಲಾಂ ಬುಟ್ಟಾವಿ ಸತ್ತಿದ್ದಾನೆ. ಆತನನ್ನು ಪಾಕಿಸ್ಥಾನದ ಪಂಜಾಬ್ ಪ್ರಾಂತದ ಶೇಖ್ಪುರದ ಜೈಲಲ್ಲಿ ಇರಿಸಲಾಗಿತ್ತು. 26/11 ದಾಳಿಯ ಉಗ್ರರಿಗೆ ವಿತ್ತೀಯ ನೆರವು ಮಾತ್ರವಲ್ಲದೆ, 2002 ಹಾಗೂ 2008 ರಲ್ಲಿ ಪಾಕ್ ಪೊಲೀಸರು ಉಗ್ರ ಹಫೀಜ್ ಸಯ್ಯದ್ನನ್ನು ಸೆರೆ ಹಿಡಿದಾಗ ಎಲ್ಇಟಿ ಮುಖ್ಯಸ್ಥನಾಗಿ ಆ ಉಗ್ರ ಸಂಘಟನೆಯನ್ನು ಮುನ್ನಡೆಸಿದ್ದ. 2012ರಲ್ಲಿ ವಿಶ್ವಸಂಸ್ಥೆ ಬುಟ್ಟಾವಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಗೊಳಿಸಿತ್ತು. ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಆತನಿಗೆ 2020ರಲ್ಲಿ 16 ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆತನ ಅಂತಿಮ ಸಂಸ್ಕಾರದ ವೀಡಿಯೋ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಂಗಳವಾರ ವಿಚಾರ ಬಹಿರಂಗಗೊಂಡಿದೆ.
Advertisement
26/11 ಉಗ್ರರ ತರಬೇತುದಾರನ ಹತ್ಯೆ
12:01 AM May 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.