Advertisement

ಬೀದಿ ನಾಯಿಗೆ ಆಹಾರ ನೀಡುವ ವೇಳೆ ಯುವತಿ ಮೇಲೆ ಹರಿದ ಕಾರು: ಗಂಭೀರ

02:41 PM Jan 16, 2023 | Team Udayavani |

ಚಂಡಿಗಢ: ಬೀದಿ ನಾಯಿಗೆ ಆಹಾರ ನೀಡುತ್ತಿರುವಾಗ ಕಾರು ಹರಿದು ಯುವತಿಯೊಬ್ಬಳು ಗಂಭೀರ ಗಾಯಗೊಂಡಿರುವ ಘಟನೆ ಚಂಡಿಗಢದಲ್ಲಿ ನಡೆದಿದೆ.

Advertisement

ಜ.14 (ಶನಿವಾರ) ರಸ್ತೆ ಬದಿಯ ಬೀದಿಯ ನಾಯಿಗೆ ತೇಜಸ್ವಿತಾ(25) ಆಹಾರ ನೀಡಲು ತೆರಳಿದ್ದಾರೆ. ಬೀದಿ ನಾಯಿಯನ್ನು ಮುದ್ದು ಮಾಡುತ್ತಾ, ಆಹಾರವನ್ನು ನೀಡುತ್ತಿದ್ದ ವೇಳೆ ಅತ್ತ ಕಡೆಯಿಂದ ವೇಗವಾಗಿ ಬಂದ ಕಾರು ತೇಜಸ್ವಿತಾ ಅವರ ಮೇಲೆ ಹರಿದು ಪರಾರಿಯಾಗಿದೆ.

ಗಂಭೀರವಾಗಿ ಗಾಯಗೊಂಡ ತೇಜಸ್ವಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಳ ತಲೆಯ ಎರಡೂ ಬದಿಗಳಲ್ಲಿ ಹೊಲಿಗೆಗಳನ್ನು ಹಾಕಲಾಗಿದೆ.

ಇದನ್ನೂ ಓದಿ: ಕಾಪು: ರಸ್ತೆ ಬಿಟ್ಟು ಗೂಡಂಗಡಿಯೊಳಗೆ ನುಗ್ಗಿದ ಲಾರಿ; ಓರ್ವ ಗಾಯ

ಯುವತಿ ತಂದೆ ಓಜಸ್ವಿ ಕೌಶಲ್ ಸೆಕ್ಟರ್ 61 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತೇಜಸ್ವಿತಾ ಆರ್ಕಿಟೆಕ್ಟ್ ಪದವೀಧರರಾಗಿದ್ದು, ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದಾಳೆ ಎಂದು ತಂದೆ ಹೇಳಿದ್ದಾರೆ.

Advertisement

ತೇಜಸ್ವಿತಾ ಹಾಗೂ ಅವರ ತಾಯಿ ಮಾರುಕಟ್ಟೆ ಬಳಿ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next