Advertisement

ವೀರಾಜಪೇಟೆ: ಕತ್ತಿಯಿಂದ ಕಡಿದು ಯುವತಿಯ ಹತ್ಯೆ

12:59 AM Jan 17, 2023 | Team Udayavani |

ಮಡಿಕೇರಿ: ಕತ್ತಿಯಿಂದ ಕಡಿದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ರವಿವಾರ ಮುಸ್ಸಂಜೆ ನಡೆದಿದೆ. ಸ್ಥಳೀಯ ನಿವಾಸಿ ಮಾದಪ್ಪ ಮತ್ತು ಸರಸ್ವತಿ ದಂಪತಿಯ ಪುತ್ರಿ, ಬಿಎ ಪದವೀಧರೆ ಆರತಿ (24) ಮೃತ ಯುವತಿ. ಮನೆಯಿಂದ ಅನತಿ ದೂರದಲ್ಲಿ ಕೃತ್ಯ ಎಸಗಲಾಗಿದೆ.

Advertisement

ಸ್ಥಳದಲ್ಲಿ ವ್ಯಕ್ತಿಯೊಬ್ಬರ ಹೆಲ್ಮೆಟ್‌ ಪತ್ತೆಯಾಗಿದ್ದು, ಅದು ಸ್ಥಳೀಯರೇ ಆಗಿರುವ ತಮ್ಮಯ್ಯ ಅವರಿಗೆ ಸೇರಿದ್ದಾಗಿದೆ. ಘಟನೆಯ ಬಳಿಕ ಅವರ ಪತ್ತೆಯೂ ಇಲ್ಲ ಎನ್ನಲಾಗಿದೆ. ಪಕ್ಕದ ಕೆರೆಯ ಬಳಿ ಮೊಬೈಲ್‌, ಮದ್ಯ ಹಾಗೂ ವಿಷದ ಬಾಟಲಿ ಕಂಡು ಬಂದಿದ್ದು, ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸೋಮವಾರ ಅಗ್ನಿಶಾಮಕ ದಳ ಹಾಗೂ ಈಜುಗಾರರಿಂದ ಕೆರೆಯಲ್ಲಿ ಶೋಧ ನಡೆಯಿತು. ಸಂಜೆಯವರೆಗೆ ಸುಳಿವು ದೊರೆತಿಲ್ಲ.

ಜಿಲಾಲ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಹಾಗೂ ವೀರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next