Advertisement

ವಿಜಯಪುರದಲ್ಲಿ ಒಂದೇ ದಿನ 20 ಮಿ.ಮೀ. ಮಳೆ: ಸಿಡಿಲಿಗೆ ಹಸು, ಆರು ಮೇಕೆ ಬಲಿ

06:41 PM May 13, 2022 | Team Udayavani |

ವಿಜಯಪುರ: ದ್ರಾಕ್ಷಿಯ ಕಣಜ, ಲಿಂಬೆ ನಾಡು ಎಂದೆಲ್ಲ ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸರಾಸರಿ 20.23 ಮಿ.ಮೀ. ಮಳೆ ದಾಖಲಾಗಿದೆ. ಇದರೊಂದಿಗೆ ಟ್ಯಾಂಕರ್ ಮೂಲಕ ತೋಟಗಾರಿಕೆ ಬೆಳೆ ಉಳಿಸಿಕೊಳ್ಳುವ ದುಸ್ಥಿತಿ ಎದುರಿಸುತ್ತಿದ್ದ ರೈತರು ಸಂತಸಗೊಂಡಿದ್ದಾರೆ. ಮತ್ತೊಂದೆಡೆ 40 ಡಿ.ಸೆ. ಗಡಿ ದಾಟಿದ್ದ ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆದ ಮಳೆ ನೆಮ್ಮದಿ ಕರುಣಿಸಿದೆ.

Advertisement

ಮುದ್ದೇಬಿಹಾಳ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 34.2 ಮಿ.ಮೀ. ಮಳೆ ಸುರಿದರೆ, ತಿಕೋಟಾ ತಾಲೂಕಿನಲ್ಲಿ 3.6 ಮಿ.ಮೀ. ಮಳೆ ಸುರಿದಿದೆ. ಇದೇ ತಾಲೂಕಿನ ನಾಲತವಾಡ ಭಾಗದಲ್ಲಿ 40.4 ಮಿ.ಮೀ. ಮಳೆಯಾಗಿದ್ದು, ವಿಜಯಪುರ ನಗರದಲ್ಲಿ 19.2ಮಿ.ಮೀ. ಮಳೆ ದಾಖಲಾಗಿದೆ.

ವಿಜಯಪುರ ತಾಲೂಕಿನಲ್ಲಿ ಸರಾಸರಿ 21.02 ಮಿ.ಮೀ., ಬಬಲೇಶ್ವರ ತಾಲೂಕಿನಲ್ಲಿ ಸರಾಸರಿ 20.8 ಮಿ.ಮೀ., ತಿಕೋಟಾ ತಾಲೂಕಿನಲ್ಲಿ 3.6 ಮಿ.ಮೀ., ಬಸವನಬಾಗೇವಾಡಿ ತಾಲೂಕಿನಲ್ಲಿ 27.3 ಮಿ.ಮೀ., ನಿಡಗುಂದಿ ತಾಲೂಕಿನಲ್ಲಿ 34 ಮಿ.ಮೀ., ಕೊಲ್ಹಾರ ತಾಲೂಕಿನಲ್ಲಿ 28 ಮಿ.ಮೀ., ತಾಳಿಕೋಟೆ ತಾಲೂಕಿನಲ್ಲಿ 13.60 ಮಿ.ಮೀ., ಇಂಡಿ ತಾಲೂಕಿನಲ್ಲಿ 21.80 ಮಿ.ಮೀ., ಚಡಚಣ ತಾಲೂಕಿನಲ್ಲಿ 15.65 ಮಿ.ಮೀ., ಸಿಂದಗಿ ತಾಲೂಕಿನಲ್ಲಿ 12.50 ಮಿ.ಮೀ., ದೇವರಹಿಪ್ಪರಗಿ ತಾಲೂಕಿನಲ್ಲಿ 10.63 ಮೀ.ಮೀ., ಮಳೆ ಸುರಿದಿದೆ.

ಪ್ರಾಣಿ ಹಾನಿ
ಗುರುವಾರ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಸಿಡಿಲಿಗೆ ಮಹಾದೇವ ಯಮನಪ್ಪ ಜೇರಟಗಿ ಎಂಬ ರೈತರಿಗೆ ಸೇರಿದ ಒಂದು ಹಸು, ನಾಲತವಾಡ ಗ್ರಾಮದ ಬಳಿಯ ಚವನಭಾವಿ ಗ್ರಾಮದಲ್ಲಿ ಮಲ್ಲಪ್ಪ ನಂದಪ್ಪ ಗುರಿಕಾರ ಅವರಿಗೆ ಸೇರಿದ ಆರು ಮೇಕೆಗಳು ಬಲಿಯಾಗಿವೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next