Advertisement

2024 Mysuru Dasara; ಅಂಬಾರಿ ಹೊರಲು ಸಮರ್ಥಎಂಬ ಸಂದೇಶ ಸಾರಿದ ಅಭಿಮನ್ಯು!

12:54 AM Aug 25, 2024 | Team Udayavani |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದಿಳಿದಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಶನಿವಾರ ತೂಕ ಪರೀಕ್ಷೆ ನಡೆದಿದ್ದು, ಕ್ಯಾಪ್ಟನ್‌ ಅಭಿಮನ್ಯು ಹೆಚ್ಚಿಸಿಕೊಳ್ಳುವ ಮೂಲಕ ಅಂಬಾರಿ ಹೊರಲು ಸಮರ್ಥನಿದ್ದೇನೆ ಎಂಬ ಸಂದೇಶ ಸಾರಿದ್ದಾನೆ.

Advertisement

ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್‌ ಆ್ಯಂಡ್‌ ಕೊ ಎಲೆಕ್ಟ್ರಾನಿಕ್‌ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲಿಸಲಾಯಿತು.

ಕ್ಯಾಪ್ಟನ್‌ ಅಭಿಮನ್ಯು ಅತ್ಯಧಿಕ ಭಾರವಿದ್ದರೆ, ಎರಡನೇ ಸ್ಥಾನದಲ್ಲಿ ಧನಂಜಯ ಆನೆ ಇದೆ. ಅಭಿಮನ್ಯು 5,560 ಕೆ.ಜಿ, ಧನಂಜಯ 5,155, ಗೋಪಿ 4,970, ಭೀಮ 4,945, ಹೊಸ ಆನೆ ಏಕಲವ್ಯ 4,730, ದಸಾರಕ್ಕೆ ಎರಡನೇ ಬಾರಿ ಬಂದಿರುವ ಕಂಜನ್‌ 4,515, ರೋಹಿತ್‌ 3,625 ತೂಕವಿದ್ದರೆ, ವರಲಕ್ಷ್ಮೀ 3,495, ಲಕ್ಷ್ಮೀ 2,480 ಕೆ.ಜಿ. ತೂಕ ತೂಗಿದವು.

Advertisement

Udayavani is now on Telegram. Click here to join our channel and stay updated with the latest news.

Next