Advertisement

2019ರ ಜಾಮಿಯಾ ಮಿಲಿಯಾ ಗಲಭೆ : ಶರ್ಜೀಲ್‌ ಇಮಾಮ್‌ಗೆ ಜಾಮೀನು

10:36 PM Feb 04, 2023 | Team Udayavani |

ನವದೆಹಲಿ: ಯಾವುದೆ ವಿಚಾರಗಳಲ್ಲಿ ಪ್ರತಿರೋಧ ಒಡ್ಡುವವರ ಅಥವಾ ಭಿನ್ನಾಭಿಪ್ರಾಯ ಹೊಂದಿರುವವರ ವಿರುದ್ಧ ಕೇಸು ದಾಖಲಿಸುವ ಬದಲು, ತನಿಖಾ ಸಂಸ್ಥೆಗಳು ಗಲಭೆಗಳ ಹಿಂದಿನ ಸಂಚುಕೋರರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂದು ದೆಹಲಿಯ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Advertisement

2019ರ ಜಾಮಿಯಾ ಮಿಲಿಯಾ ಗಲಭೆ ಸಂಬಂಧಿಸಿ ಬಂಧಿತನಾಗಿದ್ದ ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್‌ ಇಮಾಮ್‌ ಹಾಗೂ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತ ಆಸಿಫ್ ಇಕ್ಬಾಲ್‌ ತನ್ಹಾರನ್ನು ಸಾಕೇತ್‌ ಕೋರ್ಟ್‌ ಬಿಡುಗಡೆಗೊಳಿಸಿದೆ.

ಈ ವೇಳೆ ಹೆಚ್ಚುವರಿ ಸೆಷನ್‌ ನ್ಯಾಯಾಧೀಶರಾದ ಅರುಲ್‌ ವರ್ಮಾ, ಸಂಚುಕೋರರು ಹಾಗೂ ಪ್ರತಿರೋಧ ಒಡ್ಡುವವರ ನಡುವೆ ವ್ಯತ್ಯಾಸವಿದೆ. ಸಂಚುಕೋರರ ವಿರುದ್ಧದ ಕ್ರಮ ಆದ್ಯತೆಯಾಗಬೇಕು ಎಂದು ತನಿಖಾ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ. ಇಮಾಮ್‌ ವಿರುದ್ಧ ಮತ್ತೊಂದು ಪ್ರಕರಣ ಇತ್ಯರ್ಥಕ್ಕೆ ಬಾಕಿಯಿರುವ ಕಾರಣ ಅವರು ಸೆರೆವಾಸದಲ್ಲಿಯೇ ಮುಂದುವರಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next