Advertisement

PM ನರೇಂದ್ರ ಮೋದಿ ಜತೆ ಸಂವಾದ ನಡೆಸಲಿರುವ ರಾಜ್ಯದ 20 ಲಖಪತಿ ದೀದಿಗಳು

11:43 PM Mar 08, 2024 | Team Udayavani |

ಬೆಂಗಳೂರು: ಹೊಸದಿಲ್ಲಿಯಲ್ಲಿ ಪ್ರಧಾನ ಮಂತ್ರಿಗಳೊಂದಿಗೆ ನಡೆಯಲಿರುವ “ಲಖಪತಿ ದೀದಿ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ 20 ಮಹಿಳೆಯರು ಆಯ್ಕೆಯಾಗಿದ್ದಾರೆ.

Advertisement

ಮಾ. 11ರಂದು ದಿಲ್ಲಿಯ ಐಸಿಎಆರ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಳ್ಯದ ಸಂಪಾಜೆ ಗ್ರಾಮದ ಮೋಹಿನಿ, ದೇವನಹಳ್ಳಿಯ ಜಿ. ಮುದ್ದೇನಹಳ್ಳಿಯ ಸುಗುಣ, ನಲ್ಲೂರಿನ ಮೈತ್ರಿ, ಶಿರಗುಪ್ಪದ ಕೆಂಚನಗುಡ್ಡ ಗ್ರಾಮದ ಬಿ. ಲಕ್ಷ್ಮೀದೇವಿ, ಬಾಗೇವಾಡಿ ಗ್ರಾಮದ ಶಾರದಾ ನಾಯಕ, ಬಾಗೇಪಲ್ಲಿಯ ಚಾಕವೇಲು ಗ್ರಾಮದ ಅಶ್ವತ್ಥಮ್ಮ, ಗೌರಿಬಿದನೂರಿನ ಮುದಗೆರೆ ಗ್ರಾಮದ ಪ್ರಭಾವತಿ, ಹಿರಿಯೂರಿನ ಐಮಂಗಲ ಗ್ರಾಮದ ಉಮಾದೇವಿ, ಹೊಸದುರ್ಗದ ಕಂಚೀಪುರ ಗ್ರಾಮದ ಸಿಂಧು, ಧಾರವಾಡದ ಉಪ್ಪಿನಬೆಟಗೇರಿಯ ಝಾನ್ಸಿ ಲಕ್ಷ್ಮೀ ಹೂಗಾರ, ರೋಣದ ಅಮರಗೋಳದ ಶಂಕ್ರಮ್ಮ ಎಸ್‌. ಹಾದಿಮನಿ, ಬೆಳವಣಕಿ ಗ್ರಾಮದ ಮಂಜುಳಾ ಬಿ. ಹೊಸಂಗಡಿ, ಕೋಲಾರದ ಅ. ಕೊತ್ತನೂರು ಗ್ರಾಮದ ಹಂಸವೇಣಿ ಎಂ. ಕೊಪ್ಪಳದ ಅಳವಂಡಿ ಗ್ರಾಮದ ರೇಣುಕಾ ಈ ಹಳ್ಳಿಗುಡಿ, ಬೇವಿನಹಳ್ಳಿ ಗ್ರಾಮದ ಜಯಶ್ರೀ ಎಚ್‌. ಮರುಡಿ, ಸಿ. ಎನ್‌. ಹಳ್ಳಿಯ ಚವಳಕಟ್ಟಿ ಗ್ರಾಮದ ಧನಲಕ್ಷ್ಮಿ ಎಚ್‌. ಎಸ್‌., ಮಧುಗಿರಿಯ ಗಂಜಲಗುಂಟೆ ಗ್ರಾಮದ ಉಮಾದೇವಿ, ಯಲ್ಲಾಪುರದ ಕಂಪ್ಲಿ ಗ್ರಾಮದ ಲಕ್ಷ್ಮಿ ದಿನೇಶ್‌ ಆಚಾರಿ, ನಿಡಗುಂದಿ ಗ್ರಾಮದ ಶ್ವೇತಾ ಮಹೇಶ್‌ ಸಿದ್ದಿ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next