Advertisement
ವಸತಿ ಯೋಜನೆಗಳ ಅನುಷ್ಠಾನಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2 ಸಾವಿರ ಎಕರೆ, ಉಳಿದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 500 ಎಕರೆ, ನಗರಸಭೆ, ಪುರಸಭೆಗಳಲ್ಲಿ 250 ಎಕರೆ ಹಾಗೂ ಇತರೆ ಪಟ್ಟಣ ಪ್ರದೇಶಗಳಲ್ಲಿ 100 ಎಕರೆ ಸರ್ಕಾರಿ ಜಮೀನು ಮೀಸಲಿಡಲು ಸರ್ಕಾರ ಉದ್ದೇಶಿಸಿದೆ.
Related Articles
Advertisement
ಬೀದಿ ದೀಪಗಳಿಗೆ ಎಲ್ಇಡಿ ರಾಜ್ಯದ ಎಲ್ಲ ಸ್ಮಾರ್ಟ್ಸಿಟಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೀದಿದೀಪಗಳಿಗೆ ಸಾಂಪ್ರದಾಯಿಕ ದೀಪದ ಬದಲಿಗೆ ಕೇಂದ್ರಿಕೃತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ ಹೊಂದಿದ ಎಲ್ಇಡಿ ದೀಪ ಅಳವಡಿಸುವುದಾಗಿ ಪ್ರಕಟಿಸಿರುವ ಮುಖ್ಯಮಂತ್ರಿಗಳು, ವಿದ್ಯುತ್ ಉಳಿತಾಯಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು ಮತ್ತು ನಗರ ಸಭೆ ವ್ಯಾಪ್ತಿಗಳಲ್ಲಿ ಜಾರಿಗೊಳಿಸುವುದು. ಎರಡನೇ ಹಂತದಲ್ಲಿ ಎಲ್ಲ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನದ ಮೂಲಕ ವಿದ್ಯುತ್ ಸದ್ಬಳಕೆಗೆ ಒತ್ತು ನೀಡುವುದಾಗಿ ಉಲ್ಲೇಖೀಸಿದ್ದಾರೆ. ತ್ಯಾಜ್ಯನೀರು ಮರುಬಳಕೆ
ನೀರಿನ ಅಭಾವ ಹೆಚ್ಚಾಗುತ್ತಿರುವ ಬೆನ್ನಲ್ಲೇ ತ್ಯಾಜ್ಯ ನೀರು ಸಂಸ್ಕರಿಸಿ ಬಳಸುವ ವ್ಯವಸ್ಥೆ ಜಾರಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಂಗಳೂರು ಸೇರಿ ಎಲ್ಲ ನಗರಗಳಲ್ಲಿ ಕೃಷಿ, ಕೈಗಾರಿಕೆ ಇತರೆ ಉದ್ದೇಶಗಳಿಗೆ ಹೆಚ್ಚುವರಿ ನೀರಿನ ಬೇಡಿಕೆ ಪೂರೈಸಲು, ಥರ್ಮಲ್ ಘಟಕ ಸೇರಿದಂತೆ ನಗರ ಪ್ರದೇಶದ ತ್ಯಾಜ್ಯ ನೀರಿನ ಮರು ಬಳಕೆಗಾಗಿ ಸಂಸ್ಕರಣೆ ಮಾಡಲು ನೀತಿ ರೂಪಿಸಲಾಗಿದೆ. ಪ್ರಾಯೋಗಿಕವಾಗಿ 10 ನಗರಗಳಲ್ಲಿ ತ್ಯಾಜ್ಯನೀರಿನ ಸಂಸ್ಕರಣೆ ಮರು ಬಳಕೆ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೆಕ್ಕಕ್ಕೆ ಸಿಗದ ನೀರು ಸೋರಿಕೆ ಪ್ರಮಾಣ ಇಳಿಕೆಗೆ ಪೌರಾಡಳಿತ ನಿರ್ದೇಶನಾಲಯದ ಹಂತದಲ್ಲೇ ಪ್ರತ್ಯೇಕ ಉಸ್ತುವಾರಿ ಕೋಶ ಸ್ಥಾಪಿಸುವುದಾಗಿ ಉಲ್ಲೇಖೀಸಿದ್ದಾರೆ. ಅಂತರ್ಜಾಲದಲ್ಲಿ ಮಾಹಿತಿ
ನೀರು ಸರಬರಾಜು ಯೋಜನೆಗಳ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 10 ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೊಳಿಸಲು 25 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನೀರು ಸರಬರಾಜು ಯೋಜನೆಗಳ ಮಾಹಿತಿ, ಪ್ರಮಾಣಿತ ಸೇವಾ ಮಟ್ಟದ ಸೂಚಕ ಒಳಗೊಂಡಂತೆ ಮಾಹಿತಿ ತಂತ್ರಜ್ಞಾನ ಉಪಕರಣ ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಅಂತರ್ಜಾಲದಲ್ಲೇ ಸಮಗ್ರ ಮಾಹಿತಿ ಪಡೆಯಲು ವ್ಯವಸ್ಥೆ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ. ಹಂತ ಹಂತವಾಗಿ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹಂತ ಹಂತವಾಗಿ ವಿಸ್ತರಿಸುವ ಉಲ್ಲೇಖವಿದೆ.