Advertisement

ಉತ್ತರಾಖಂಡದಲ್ಲಿ ಕಾರು ಅಪಘಾತ: ಚುನಾವಣಾ ಅಧಿಕಾರಿಗಳಿಬ್ಬರ ಸಾವು

02:57 PM Feb 16, 2017 | Team Udayavani |

ಉತ್ತರಕಾಶಿ, ಉತ್ತರಾಖಂಡ: ಜಿಲ್ಲೆಯ ನಾಲೂಪಾನಿ ಪ್ರದೇಶದಲ್ಲಿ ಇಂದು ನಸುಕಿನ ವೇಳೆ ಚುನಾವಣಾ ಕರ್ತವ್ಯವನ್ನು ಮುಗಿಸಿ ಕಾರಿನಲ್ಲಿ ಮರಳುತ್ತಿದ್ದ ಇಬ್ಬರು ಅಧಿಕಾರಿಗಳು, ಕಾರು ಆಳವಾದ ಕಂದಕಕ್ಕೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Advertisement

ನಸುಕಿನ ಸುಮಾರು 1 ಗಂಟೆಯ ಹೊತ್ತಿಗೆ ಈ ಅವಘಡ ಸಂಭವಿಸಿದೆ. ಗಂಗೋತ್ರಿ ವಿಧಾನಸಭಾ ಕ್ಷೇತ್ರದ ಧೌಂತಾರಿ ಎಂಬಲ್ಲಿ ಚುನಾವಣಾ ಕರ್ತವ್ಯ ಮುಗಿಸಿದ ಇಬ್ಬರು ಅಧಿಕಾರಿಗಳು ಕಾರನಿನಲ್ಲಿ ಮರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿತು ಎಂದು ಭಾತ್‌ವಾಡಿ ಎಸ್‌ಡಿಎ, ನಿಕಿತಾ ಖಂಡೇಲ್‌ವಾಲಾ ತಿಳಿಸಿದರು.

ಚಕ್ರಾತಾ ನಿವಾಸಿಯಾದ 30ರ ಹರೆಯದ ಅಭಿಷೇಕ್‌ ಚೌಹಾಣ್‌ ಮತ್ತು ಪ್ರಮೋದ್‌ (32) ಸ್ಥಳದಲ್ಲೇ ಮೃತಪಟ್ಟರು. 

ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಸಿಬಂದಿಗಳು ಸ್ಥಳೀಯರ ನೆರವಿನೊಂದಿಗೆ ಕಂದಕಕ್ಕೆ ಬಿದ್ದ ಕಾರಿನಿಂದ ಶವಗಳನ್ನು ಮೇಲಕ್ಕೆತ್ತಿದರು. ಪೊಲೀಸು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next