Advertisement

ನಟ ಶಾರುಖ್ ಖಾನ್ ಐಶಾರಾಮಿ ಬಂಗಲೆ ಪ್ರವೇಶಿಸಲು ಯತ್ನ; ಇಬ್ಬರು ಯುವಕರ ಬಂಧನ

12:30 PM Mar 03, 2023 | Team Udayavani |

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ “ಮನ್ನತ್” ಬಂಗಲೆಗೆ ನುಗ್ಗಿರುವ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ರಾತ್ರಿ (ಮಾರ್ಚ್ 03) ನಡೆದಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:ಭಯೋತ್ಪಾದನೆ ಬೆಂಬಲಿಸುವ ಸಂಘಟನೆಗಳ ಮತ ನಮಗೆ ಬೇಕಾಗಿಲ್ಲ: ಕೆಎಸ್ ಈಶ್ವರಪ್ಪ

ಪಶ್ಚಿಮ ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡ್ ಪ್ರದೇಶದಲ್ಲಿರುವ ಶಾರುಖ್ ಐಶಾರಾಮಿ ಬಂಗಲೆಗೆ ಇಬ್ಬರು ಅತಿಕ್ರಮವಾಗಿ ಪ್ರವೇಶಿಸಿದ್ದು, ಇಬ್ಬರು ಆರೋಪಿಗಳು ಗುಜರಾತ್ ನ ಸೂರತ್ ಮೂಲದವರು ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ 9.30ರ ಸುಮಾರಿಗೆ ಇಬ್ಬರು ಯುವಕರು ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಮೂರನೇ ಮಹಡಿ ಬಳಿ ತಲುಪಿದ್ದ ಸಂದರ್ಭದಲ್ಲಿ ಖಾನ್ ಅವರ ಭದ್ರತಾ ಸಿಬಂದಿಗಳು ಅವರನ್ನು ಸೆರೆಹಿಡಿದಿರುವುದಾಗಿ ವರದಿ ವಿವರಿಸಿದೆ.

ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಶಾರುಖ್ ಬಂಗಲೆ ಪ್ರವೇಶಿಸಿದ ಇಬ್ಬರು ಯುವಕರನ್ನು ಭದ್ರತಾ ಸಿಬಂದಿಗಳು ನಮಗೆ ಒಪ್ಪಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಅವರು, ತಾವಿಬ್ಬರು ಪಠಾಣ್ ನಟನನ್ನು ಭೇಟಿಯಾಗಲು ಗುಜರಾತ್ ನಿಂದ ಆಗಮಿಸಿರುವುದಾಗಿ ತಿಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಇನ್ನಷ್ಟೇ ಪೂರ್ಣ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸೂಪರ್ ಸ್ಟಾರ್ ನಟರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿರುವುದು ಇದೇ ಮೊದಲ ಪ್ರಕರಣವಲ್ಲ, 2016ರ ಆಗಸ್ಟ್ ನಲ್ಲಿ 23 ವರ್ಷದ ಯುವಕನೊಬ್ಬ ಅಮಿತಾಬ್ ಬಚ್ಚನ್ ಅವರ ಭದ್ರತೆಯನ್ನು ಉಲ್ಲಂಘಿಸಿ ಬಚ್ಚನ್ ಅವರ ಜಲ್ಸಾ ಬಂಗಲೆ ಪ್ರವೇಶಿಸಲು ಯತ್ನಿಸಿದ್ದ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next