Advertisement

ಕಿರಾಣಿ ವರ್ತಕರ ಸಂಘದ 2 ಲಕ್ಷರೂ.ಚೆಕ್‌ ವಿತರಣೆ

02:37 PM Apr 20, 2020 | Suhan S |

ಧಾರವಾಡ: ಕೋವಿಡ್ 19 ವೈರಾಣು ನಿಯಂತ್ರಣ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅಗತ್ಯ ತುರ್ತು ಕ್ರಮಗಳ ನಿರ್ವಹಣೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧಾರವಾಡ ಕಿರಾಣಿ ವರ್ತಕರ ಸಂಘದಿಂದ 2 ಲಕ್ಷ ರೂ.ಗಳ ದೇಣಿಗೆ ಸಲ್ಲಿಸಲಾಯಿತು.

Advertisement

ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ನೇತೃತ್ವದಲ್ಲಿ ಧಾರವಾಡ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ದೊಡಮನಿ ಅವರು 2 ಲಕ್ಷ ರೂ.ಗಳ ದೇಣಿಗೆ ಚೆಕ್‌ನ್ನು ಡಿಸಿ ದೀಪಾ ಚೋಳನ್‌ ಅವರಿಗೆ ಸಲ್ಲಿಸಿದರು. ಕಿರಾಣಿ ವರ್ತಕರ ಸಂಘದ ರವೀಂದ್ರ ವಸ್ತ್ರದ, ಮಹಾಂತೇಶ ಪಟ್ಟಣಶೆಟ್ಟಿ, ವಿಶ್ವನಾಥ ವಸ್ತ್ರದ, ಹಾಲಯ್ಯ ಹಂಗರಗಿ, ಜಗದೀಶ ಶಹಾ, ಶಿವಮೂರ್ತಿ ಕೋಟೂರ, ಎಂ.ವಿ. ಹರಿಹರ, ಅಶೋಕ ಕಲಾಲ, ಸುಬ್ರಹ್ಮಣ್ಯ ಶೆಟ್ಟಿ, ಅನಿಲ ಕಲಾಲ ಇದ್ದರು. ಇದೇ ಸಂದರ್ಭದಲ್ಲಿ ಅರವಿಂದ ಬೆಲ್ಲದ ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಡಜನತೆಗೆ ವಿತರಿಸಲು ಕಿರಾಣಿ ವರ್ತಕರ ಸಂಘದಿಂದ 1 ಲಕ್ಷ ರೂ.ಗಳ ಆಹಾರ ಪದಾರ್ಥ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next