Advertisement

ಹೊಂಚು ದಾಳಿ: 5 ಯೋಧರು ಹುತಾತ್ಮ; 3 ಉಗ್ರರು ಫಿನಿಶ್‌

11:48 AM Dec 31, 2017 | |

ಶ್ರೀನಗರ: ಪ್ರತ್ಯೇಕ ಘಟನೆಗಳಲ್ಲಿ  ಐವರು ಭಾರತೀಯ ಯೋಧರು ಹುತಾತ್ಮರಾದ ಘಟನೆ ಭಾನುವಾರ  ನಡೆದಿದೆ. 

Advertisement

ಪುಲ್ವಮಾ ಸೆಕ್ಟರ್‌ನಲ್ಲಿ  ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ಜೆಇಎಮ್‌  ಉಗ್ರರು ದಾಳಿ ನಡೆಸಿದ್ದು  ಕನಿಷ್ಠ ನಾಲ್ವರು ಯೋಧರು  ಹುತಾತ್ಮರಾಗಿದ್ದು, ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆಯ ದಿಗ್‌ವಾರ್‌ ಸೆಕ್ಟರ್‌ನಲ್ಲಿ ಪಾಕ್‌ ಸೇನೆ  ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಓರ್ವ ಯೋಧ ಹುತಾತ್ಮರಾಗಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. 

ಕ್ಯಾಂಪ್‌ ಮೇಲೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರು ದಾಳಿ ನಡೆಸಿದ್ದು ಗುಂಡಿನ ದಾಳಿಗೆ ನಾಲ್ವರು  ಯೋಧರು  ಹುತಾತ್ಮರಾದರೆ  ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಯಾಂಪ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹೊಡೆದುರಿಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಗಡಿಯಲ್ಲಿ ಪಾಕ್‌ ದಾಳಿಗೆ ಭಾರತೀಯ ಸೇನಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ ಎಂದು ವರದಿಯಾಗಿದೆ. 

ಡಿಸೆಂಬರ್‌ 23 ರಂದು ಪಾಕ್‌ ನಡೆಸಿದ ಗುಂಡಿನ ದಾಳಿಯಲ್ಲಿ ಮೇಜರ್‌ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next